<p><strong>ಉಡುಪಿ:</strong> ಮಲ್ಪೆ ಪಡುಕೆರೆ ಬಳಿಯ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಯುವಕರು ದೈತ್ಯಗಾತ್ರದ ಅಲೆಗಳ ಹೊಡೆತಕ್ಕೆನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.</p>.<p>ಉದ್ಯಾವರದ ಪಿತ್ರೋಡಿ ಮುಡ್ಡಲಗುಡ್ಡೆಯ ನಿವಾಸಿಗಳಾದ ನಿತೇಶ್ ಸಾಲ್ಯಾನ್ (27) ಮತ್ತು ನಿಶಾಂತ್ ತಿಂಗಳಾಯ (19) ಮೃತಪಟ್ಟವರು.</p>.<p>ಪಡುಕರೆ ಸಮುದ್ರತೀರದಲ್ಲಿ ಕೈರಂಪಣಿ ಮೀನುಗಾರಿಕೆ ಮಾಡುವ ತಂಡದಲ್ಲಿದ್ದ ಯುವಕರು ಸಮುದ್ರಕ್ಕಿಳಿದಾಗ ಈ ದುರ್ಘಟನೆ ಸಂಭವಿಸಿದೆ.</p>.<p>ನಿಶಾಂತ್ ತಿಂಗಳಾಯ ಅವರ ಮೃತದೇಹ ಇನ್ನೂ ಸಿಕ್ಕಿಲ್ಲ. ಸ್ಥಳೀಯ ಮೀನುಗಾರರು ಶವದ ಹುಡುಕಾಟದಲ್ಲಿ ತೊಡಗಿದ್ದಾರೆ. ನಿತೇಶ್ ಸಾಲ್ಯಾನ್ ಮೃತದೇಹ ದೊರೆತಿದ್ದು, ಉದ್ಯಾವರದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.</p>.<p><strong>ಮದುವೆಯಾಗಿ ವರ್ಷವಾಗಿತ್ತು:</strong><br />ನಿತೇಶ್ ಸಾಲ್ಯಾನ್ಗೆ ಮದುವೆಯಾಗಿ ಒಂದು ವರ್ಷವಾಗಿತ್ತು. ಮೃತನ ಸಹೋದರ ಧನರಾಜ್ ಕೂಡ ಮೂರು ವರ್ಷದ ಹಿಂದೆ ಕಿದಿಯೂರು ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಕುಟುಂಬದ ಆಧಾರ ಸ್ತಂಭವಾಗಿದ್ದ ನಿತೇಶ್ ಕೂಡ ಸಾವನ್ನಪ್ಪಿರುವುದು ಕುಟುಂಬಕ್ಕೆ ದೊಡ್ಡ ಆಘಾತ ಕೊಟ್ಟಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಮಲ್ಪೆ ಪಡುಕೆರೆ ಬಳಿಯ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಯುವಕರು ದೈತ್ಯಗಾತ್ರದ ಅಲೆಗಳ ಹೊಡೆತಕ್ಕೆನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.</p>.<p>ಉದ್ಯಾವರದ ಪಿತ್ರೋಡಿ ಮುಡ್ಡಲಗುಡ್ಡೆಯ ನಿವಾಸಿಗಳಾದ ನಿತೇಶ್ ಸಾಲ್ಯಾನ್ (27) ಮತ್ತು ನಿಶಾಂತ್ ತಿಂಗಳಾಯ (19) ಮೃತಪಟ್ಟವರು.</p>.<p>ಪಡುಕರೆ ಸಮುದ್ರತೀರದಲ್ಲಿ ಕೈರಂಪಣಿ ಮೀನುಗಾರಿಕೆ ಮಾಡುವ ತಂಡದಲ್ಲಿದ್ದ ಯುವಕರು ಸಮುದ್ರಕ್ಕಿಳಿದಾಗ ಈ ದುರ್ಘಟನೆ ಸಂಭವಿಸಿದೆ.</p>.<p>ನಿಶಾಂತ್ ತಿಂಗಳಾಯ ಅವರ ಮೃತದೇಹ ಇನ್ನೂ ಸಿಕ್ಕಿಲ್ಲ. ಸ್ಥಳೀಯ ಮೀನುಗಾರರು ಶವದ ಹುಡುಕಾಟದಲ್ಲಿ ತೊಡಗಿದ್ದಾರೆ. ನಿತೇಶ್ ಸಾಲ್ಯಾನ್ ಮೃತದೇಹ ದೊರೆತಿದ್ದು, ಉದ್ಯಾವರದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.</p>.<p><strong>ಮದುವೆಯಾಗಿ ವರ್ಷವಾಗಿತ್ತು:</strong><br />ನಿತೇಶ್ ಸಾಲ್ಯಾನ್ಗೆ ಮದುವೆಯಾಗಿ ಒಂದು ವರ್ಷವಾಗಿತ್ತು. ಮೃತನ ಸಹೋದರ ಧನರಾಜ್ ಕೂಡ ಮೂರು ವರ್ಷದ ಹಿಂದೆ ಕಿದಿಯೂರು ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಕುಟುಂಬದ ಆಧಾರ ಸ್ತಂಭವಾಗಿದ್ದ ನಿತೇಶ್ ಕೂಡ ಸಾವನ್ನಪ್ಪಿರುವುದು ಕುಟುಂಬಕ್ಕೆ ದೊಡ್ಡ ಆಘಾತ ಕೊಟ್ಟಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>