ನವದೆಹಲಿ: ಪರಿಹಾರ ಅರಣ್ಯೀಕರಣ ನಿಧಿ (ಕಾಂಪಾ) ಅಡಿಯಲ್ಲಿ ರಾಜ್ಯದ ಸಂಚಿತ ನಿಧಿಯ ಪೈಕಿ ₹363 ಕೋಟಿ 44 ಲಕ್ಷ ರೂಪಾಯಿಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ದೆಹಲಿಯಲ್ಲಿಂದು ಖಂಡ್ರೆ ಅವರು, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿದ ಫಲವಾಗಿ 8.2.2019ರಿಂದ 31.2.2022ರ ನಡುವಿನ ಅವಧಿಯಲ್ಲಿ ಸಂಚಿತವಾದ ಕಾಂಪಾ ಹಣದ ಪೈಕಿ ಕೇಂದ್ರ ನಿಧಿಯ ಹಣ ಕಡಿತ ಮಾಡಿಕೊಂಡು ಉಳಿದ ಹಣ ಬಿಡುಗಡೆ ಮಾಡಲಾಗಿದೆ.
ಪರಿಹಾರ ಅರಣ್ಯೀಕರಣಕ್ಕೆ ₹209 ಕೋಟಿ 21 ಲಕ್ಷ ಮತ್ತು ಪ್ರಸ್ತುತ ಅರಣ್ಯದ ಮೌಲ್ಯದ ಆಧಾರದಲ್ಲಿ ₹98 ಕೋಟಿ 36 ಲಕ್ಷ ರೂಪಾಯಿ ಮತ್ತು ಇತರ ವೆಚ್ಚಕ್ಕಾಗಿ ₹55 ಕೋಟಿ 86 ಲಕ್ಷ, ರೂಪಾಯಿಗಳೂ ಸೇರಿ ಒಟ್ಟು ₹363,44,38,649 ಕೋಟಿ ವರ್ಗಾವಣೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.