<p><strong>ಬೆಂಗಳೂರು: </strong>2014ನೇ ಸಾಲಿನ 464 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದ್ದು ಅಂಗವಿಕಲರ ಕೋಟಾದಲ್ಲೂ ವಂಚನೆಯಾಗಿರುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕ ಎಸ್. ಸುರೇಶ್ ಕುಮಾರ್ ದೂರಿದ್ದಾರೆ.</p>.<p>ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು ಪೇಸ್ಬುಕ್ನಲ್ಲಿ ಪ್ರಕರಣವೊಂದನ್ನು ಉಲ್ಲೇಸಿದ್ದಾರೆ. ತಮ್ಮ ಬಳಿ ಅಂಗವಿಕಲ ಅಭ್ಯರ್ಥಿಯೊಬ್ಬ ಬಂದು ತನಗೆ ವಂಚನೆಯಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.</p>.<p><strong>ಇದಕ್ಕೆ ಹಗರಣ ಎಂದರೂ ತಪ್ಪಾಗಲಾರದು.</strong></p>.<p>ಮೊದಲ ಚಿತ್ರದಲ್ಲಿರುವ ಯುವಕನ ಹೆಸರು ಬಿ. ಸುಭಾಶ್. ಇಂದು ನನ್ನ ಕಚೇರಿಗೆ ಬಂದು ತನಗೆ ಕರ್ನಾಟಕ ಲೋಕಸೇವಾ ಆಯೋಗ "ಮಾಡಿರುವ" ಅನ್ಯಾಯವನ್ನು ವಿವರಿಸಿದ.</p>.<p>ಬಲಗೈ ಇಲ್ಲದ ಸುಭಾಶ್ ವಿಕಲಚೇತನ ಕೋಟಾ ಅಡಿ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಪಾಲ್ಗೊಂಡು ಉದ್ಯೋಗ ಬಯಸಿದ್ದ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸಂದರ್ಶನಕ್ಕೂ ಹಾಜರಾಗಿದ್ದ. ಅಸಿಸ್ಟೆಂಟ್ ಕಮಿಷನರ್ (ರೆವಿನ್ಯೂ) ಮತ್ತು ಸಿ.ಟಿ.ಓ. -ಎರಡು ಹುದ್ದೆಗಳು ಲಭ್ಯವಿದ್ದವು. ವಿಕಲಚೇತನ ಕೋಟಾದಡಿ ಅರ್ಹರಾಗಿದ್ದ ಅಭ್ಯರ್ಥಿಗಳು ಮೂರು.</p>.<p>ಆದರೆ ಬಲಗೈ ಕಳೆದುಕೊಂಡ ಸುಭಾಶ್ ಗೆ ಉದ್ಯೋಗ ನೀಡುವುದರಲ್ಲಿ ವಂಚನೆಯಾಗಿದೆಯೆಂದು ತನ್ನ ಅಳಲು ತೋಡಿಕೊಂಡ.<br /> ಬದಲಿಗೆ ಎರಡನೆಯ ಮತ್ತು ಮೂರನೆಯ ಚಿತ್ರಗಳಲ್ಲಿ ಕಾಣುತ್ತಿರುವ ಅಂಗವಿಕಲತೆ ಇಲ್ಲೇ ಇಲ್ವೇನೋ ಎಂಬಂತಿರುವ ಇನ್ನಿಬ್ಬರು ತರುಣರಿಗೆ ಈ ಹುದ್ದೆಗಳು ಲಭಿಸಿವೆ.</p>.<p>ಈಗ ಪ್ರಕಟವಾಗಿರುವುದು ಪ್ರಾವಿಷನಲ್ ಪಟ್ಟಿ. ಈಗಲಾದರೂ ತಾನು ಎಸಗಿರುವ ಅನ್ಯಾಯ ಲೋಕಸೇವಾ ಆಯೋಗಕ್ಕೆ ಅರ್ಥವಾಗಬೇಕು. ಕಣ್ಣಿಗೆ ಎದ್ದು ಕಾಣುವಂತೆ ಎಸಗಿರುವ ಅನ್ಯಾಯ ಸರಿಪಡಿಸಬೇಕು.</p>.<p>ವಿಕಲಚೇತನ ಹೆಸರಿನಲ್ಲೂ ವ್ಯಾಪಾರವನ್ನೇ ಮಾಡಿಕೊಂಡರೆ, ಅದಕ್ಕೆ ಹಗರಣ ಎನ್ನದೇ ಇನ್ನೇನು ಹೇಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>2014ನೇ ಸಾಲಿನ 464 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದ್ದು ಅಂಗವಿಕಲರ ಕೋಟಾದಲ್ಲೂ ವಂಚನೆಯಾಗಿರುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕ ಎಸ್. ಸುರೇಶ್ ಕುಮಾರ್ ದೂರಿದ್ದಾರೆ.</p>.<p>ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು ಪೇಸ್ಬುಕ್ನಲ್ಲಿ ಪ್ರಕರಣವೊಂದನ್ನು ಉಲ್ಲೇಸಿದ್ದಾರೆ. ತಮ್ಮ ಬಳಿ ಅಂಗವಿಕಲ ಅಭ್ಯರ್ಥಿಯೊಬ್ಬ ಬಂದು ತನಗೆ ವಂಚನೆಯಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.</p>.<p><strong>ಇದಕ್ಕೆ ಹಗರಣ ಎಂದರೂ ತಪ್ಪಾಗಲಾರದು.</strong></p>.<p>ಮೊದಲ ಚಿತ್ರದಲ್ಲಿರುವ ಯುವಕನ ಹೆಸರು ಬಿ. ಸುಭಾಶ್. ಇಂದು ನನ್ನ ಕಚೇರಿಗೆ ಬಂದು ತನಗೆ ಕರ್ನಾಟಕ ಲೋಕಸೇವಾ ಆಯೋಗ "ಮಾಡಿರುವ" ಅನ್ಯಾಯವನ್ನು ವಿವರಿಸಿದ.</p>.<p>ಬಲಗೈ ಇಲ್ಲದ ಸುಭಾಶ್ ವಿಕಲಚೇತನ ಕೋಟಾ ಅಡಿ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಪಾಲ್ಗೊಂಡು ಉದ್ಯೋಗ ಬಯಸಿದ್ದ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸಂದರ್ಶನಕ್ಕೂ ಹಾಜರಾಗಿದ್ದ. ಅಸಿಸ್ಟೆಂಟ್ ಕಮಿಷನರ್ (ರೆವಿನ್ಯೂ) ಮತ್ತು ಸಿ.ಟಿ.ಓ. -ಎರಡು ಹುದ್ದೆಗಳು ಲಭ್ಯವಿದ್ದವು. ವಿಕಲಚೇತನ ಕೋಟಾದಡಿ ಅರ್ಹರಾಗಿದ್ದ ಅಭ್ಯರ್ಥಿಗಳು ಮೂರು.</p>.<p>ಆದರೆ ಬಲಗೈ ಕಳೆದುಕೊಂಡ ಸುಭಾಶ್ ಗೆ ಉದ್ಯೋಗ ನೀಡುವುದರಲ್ಲಿ ವಂಚನೆಯಾಗಿದೆಯೆಂದು ತನ್ನ ಅಳಲು ತೋಡಿಕೊಂಡ.<br /> ಬದಲಿಗೆ ಎರಡನೆಯ ಮತ್ತು ಮೂರನೆಯ ಚಿತ್ರಗಳಲ್ಲಿ ಕಾಣುತ್ತಿರುವ ಅಂಗವಿಕಲತೆ ಇಲ್ಲೇ ಇಲ್ವೇನೋ ಎಂಬಂತಿರುವ ಇನ್ನಿಬ್ಬರು ತರುಣರಿಗೆ ಈ ಹುದ್ದೆಗಳು ಲಭಿಸಿವೆ.</p>.<p>ಈಗ ಪ್ರಕಟವಾಗಿರುವುದು ಪ್ರಾವಿಷನಲ್ ಪಟ್ಟಿ. ಈಗಲಾದರೂ ತಾನು ಎಸಗಿರುವ ಅನ್ಯಾಯ ಲೋಕಸೇವಾ ಆಯೋಗಕ್ಕೆ ಅರ್ಥವಾಗಬೇಕು. ಕಣ್ಣಿಗೆ ಎದ್ದು ಕಾಣುವಂತೆ ಎಸಗಿರುವ ಅನ್ಯಾಯ ಸರಿಪಡಿಸಬೇಕು.</p>.<p>ವಿಕಲಚೇತನ ಹೆಸರಿನಲ್ಲೂ ವ್ಯಾಪಾರವನ್ನೇ ಮಾಡಿಕೊಂಡರೆ, ಅದಕ್ಕೆ ಹಗರಣ ಎನ್ನದೇ ಇನ್ನೇನು ಹೇಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>