ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bangalore Air Show 2023: ‘ಸೂರ್ಯಕಿರಣ’ಕ್ಕೆ 6 ತಿಂಗಳ ತಾಲೀಮು

Last Updated 16 ಫೆಬ್ರುವರಿ 2023, 6:08 IST
ಅಕ್ಷರ ಗಾತ್ರ

ಬೆಂಗಳೂರು: ‘ವೈಮಾನಿಕ ಪ್ರದರ್ಶನ ನೀಡಲು ಆರು ತಿಂಗಳು ನಿರಂತರ ತಾಲೀಮು ನಡೆಯುತ್ತದೆ. ದೈತ್ಯ ವಿಮಾನಗಳನ್ನು ಪಳಗಿಸಿದ ಅನುಭವ ಇರಬೇಕು, ದೇಹದ ತೂಕದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು...’

ಇದು ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದ ಕೇಂದ್ರ ಬಿಂದು ‘ಸೂರ್ಯಕಿರಣ’ ತಂಡದ ವಿಂಗ್ ಕಮಾಂಡರ್ ದಿಲ್ಲಾನ್ ಅವರು ಅನುಭವ ಹಂಚಿಕೊಂಡರು.

‘ಸುಖೋಯ್, ರಫೇಲ್‌ ರೀತಿಯ ದೈತ್ಯ ವಿಮಾನಗಳನ್ನು ಪಳಗಿಸಿದ ಅನುಭವ ಇರಬೇಕು. ನಿತ್ಯ 7ರಿಂದ 8 ತಾಸು ನಿದ್ರೆ ಆಗಲೇಬೇಕು. ಏರೋ ಇಂಡಿಯಾ ಮತ್ತು ಭಾರತೀಯ ವಾಯುಸೇನೆ ದಿನಾಚರಣೆ ಸಂದರ್ಭದಲ್ಲಿ ನೀಡುವ ವೈಮಾನಿಕ ಪ್ರದರ್ಶನಗಳು ನಮಗೆ ಸ್ಮರಣೀಯ ಕ್ಷಣಗಳ ಜೊತೆಗೆ ಸವಾಲು ಕೂಡ’ ಎಂದರು.

ಸೂರ್ಯಕಿರಣ್ ಅತ್ಯಂತ ವೇಗವಾಗಿ ಹಾರುವ ಮತ್ತು ಅತಿ ಹೆಚ್ಚು ಸಾಮರ್ಥ್ಯದ ವಿಮಾನ. ಇವುಗಳನ್ನು ಚಾಲನೆ ಮಾಡುವುದು ಸಂತಸದ ವಿಷಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT