ವಿಜಯಪುರ: ಜಿಲ್ಲೆಯ ಚಡಚಣ ಸಮೀಪದ ಅರ್ಜನಾಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಲಾರಿ ಮತ್ತು ಟಾಟಾ ಏಸ್ ಮಧ್ಯ ಮುಖಾಮುಖಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ತರಕಾರಿ ಮಾರಾಟ ಮಾಡಿಕೊಂಡು ಹುಬ್ಬಳ್ಳಿಯಿಂದ ಸೋಲಾಪುರಕ್ಕೆ ತೆರಳುತ್ತಿದ್ದ ಟಾಟಾ ಏಸ್ ವಾಹನ, ಸೋಲಾಪುರದಿಂದ ವಿಜಯಪುರಕ್ಕೆ ತೆರಳುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಅನೀಲ ಮರಿ ಗೌಡ (28) ಹಾಗೂ ಧಾರವಾಡ ಜಿಲ್ಲೆಯ ಈರಣ್ಣ ಎಸ್. ನೀರಲಕಟ್ಟಿ (30) ಸಾವನ್ನಪ್ಪಿದ್ದಾರೆ.