ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಗುಂಡು ಹಾರಿಸಿ ಅಕೌಂಟೆಂಟ್ ಕೊಲೆ

Last Updated 25 ಸೆಪ್ಟೆಂಬರ್ 2019, 6:40 IST
ಅಕ್ಷರ ಗಾತ್ರ

ಧಾರವಾಡ:ಇಲ್ಲಿಗೆ ಸಮೀಪದ ಸಲಕಿನಕೊಪ್ಪ ಗ್ರಾಮದ ಬಳಿ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದ್ದು, ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ದಾಂಡೇಲಿ ನಿವಾಸಿ ಶ್ಯಾಮ್ ಸುಂದರ್ ಮುತಕುಡಿ (40) ಎಂದು ಗುರುತಿಸಲಾಗಿದೆ.

ದೆಹಲಿಯಲ್ಲಿ ಪ್ಯಾನಾಸೋನಿಕ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿರುವ ಶ್ಯಾಮ ಬುಧವಾರ ಬೆಳಗ್ಗೆ ದಾಂಡೇಲಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು.

9.45ರ ಸುಮಾರಿಗೆಅವರ ಕಾರು ಬೈಪಾಸ್ ರಸ್ತೆ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣ ಕ್ಕೆ ಹೋಗುವಾಗ ಪಲ್ಸರ್ ಬೈಕ್‌ನಲ್ಲಿಬಂದ ದುಷ್ಕರ್ಮಿಗಳು, ಕಾರು ಅಡ್ಡಗಟ್ಟಿದ್ದಾರೆ. ಚಾಲಕ ವಿಚಾರಿಸಲು ಇಳಿದಾಗ, ಒಳಗೆ ಕುಳಿತಿದ್ದ ಶ್ಯಾಮ್ ಮೇಲೆ ಗುಂಡು ಹರಿಸಿ ಪರಾರಿಯಾಗಿದ್ದಾರೆ. ಗುಂಡು ಭುಜದ ಮೂಲಕ ದೇಹವನ್ನು ಹೊಕ್ಕಿದೆ.

ಕಾರ್ ಚಾಲಕ ಕೂಡಲೇಆವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆ ಗೆ ಕರೆದು ತಂದು ಚಿಕಿತ್ಸೆ ಕೊಡಿಸಿದರು. ಚಿಕಿತ್ಸೆ ಫಲಕಾರಿ ಆಗದೇ ಶ್ಯಾಮ್ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT