ಧಾರವಾಡ:ಇಲ್ಲಿಗೆ ಸಮೀಪದ ಸಲಕಿನಕೊಪ್ಪ ಗ್ರಾಮದ ಬಳಿ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದ್ದು, ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ದಾಂಡೇಲಿ ನಿವಾಸಿ ಶ್ಯಾಮ್ ಸುಂದರ್ ಮುತಕುಡಿ (40) ಎಂದು ಗುರುತಿಸಲಾಗಿದೆ.
ದೆಹಲಿಯಲ್ಲಿ ಪ್ಯಾನಾಸೋನಿಕ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿರುವ ಶ್ಯಾಮ ಬುಧವಾರ ಬೆಳಗ್ಗೆ ದಾಂಡೇಲಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು.
9.45ರ ಸುಮಾರಿಗೆಅವರ ಕಾರು ಬೈಪಾಸ್ ರಸ್ತೆ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣ ಕ್ಕೆ ಹೋಗುವಾಗ ಪಲ್ಸರ್ ಬೈಕ್ನಲ್ಲಿಬಂದ ದುಷ್ಕರ್ಮಿಗಳು, ಕಾರು ಅಡ್ಡಗಟ್ಟಿದ್ದಾರೆ. ಚಾಲಕ ವಿಚಾರಿಸಲು ಇಳಿದಾಗ, ಒಳಗೆ ಕುಳಿತಿದ್ದ ಶ್ಯಾಮ್ ಮೇಲೆ ಗುಂಡು ಹರಿಸಿ ಪರಾರಿಯಾಗಿದ್ದಾರೆ. ಗುಂಡು ಭುಜದ ಮೂಲಕ ದೇಹವನ್ನು ಹೊಕ್ಕಿದೆ.
ಕಾರ್ ಚಾಲಕ ಕೂಡಲೇಆವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆ ಗೆ ಕರೆದು ತಂದು ಚಿಕಿತ್ಸೆ ಕೊಡಿಸಿದರು. ಚಿಕಿತ್ಸೆ ಫಲಕಾರಿ ಆಗದೇ ಶ್ಯಾಮ್ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.