ವಿಧಾನಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಮೆಟ್ರೊ ಕಾಮಗಾರಿ ಸಂದರ್ಭದಲ್ಲಿ ಪೂರ್ವದ ಗೇಟ್ ಮುಚ್ಚಿಸಿ, ಪಶ್ಚಿಮದ ಗೇಟ್ ಮೂಲಕ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಒಂದೇ ಗೇಟ್ ಮೂಲಕ ಓಡಾಟಕ್ಕೆ ಅವಕಾಶ ನೀಡಿರುವುದರಿಂದ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇನ್ನಾದರೂ ಗೇಟ್ ತೆಗೆಸಿ ಎಂದು ಸಲಹೆ ನೀಡಿದರು.