ದೊಡ್ಡರಸಿನಕೆರೆ ಗ್ರಾಮದಿಂದ ಮುಮಟ್ಟನಹಳ್ಳಿಗೆ ತೆರಳುವ ರಸ್ತೆಗೆ ನಾಮಕರಣ ಮಾಡಲಾಗಿತ್ತು. ಫೆ. 28ರಂದು ಅಂಬರೀಷ್ ಪತ್ನಿ ಸುಮಲತಾ ನಾಮಫಲಕ ಅನಾವರಣ ಮಾಡಬೇಕಾಗಿತ್ತು. ಆದರೆ, ನಾಮಫಲಕ ಅಳವಡಿಕೆಗೆ ಅನುಮತಿ ಪಡೆದಿಲ್ಲ ಎಂದು ಪೊಲೀಸರು ತಡೆದಿದ್ದರು. ಪೊಲೀಸರು ಅಂಬರೀಷ್ ಭಾವಚಿತ್ರದ ಮೇಲೆ ಕಾಗದ ಮುಚ್ಚಿದ್ದರು. ಶನಿವಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಏಕಾಏಕಿ ನಾಮಫಲಕ ತೆರವುಗೊಳಿಸಿದ್ದಾರೆ. ಇದರ ಹಿಂದೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಕೈವಾಡವಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.