<p><strong>ಬೆಂಗಳೂರು</strong>: ಇಂಧನ ಸಮಸ್ಯೆ ನಿವಾರಣೆ ಹಾಗೂ ವಾತಾವರಣದಲ್ಲಿ ಕಾರ್ಬನ್ ಅಂಶವನ್ನು ಕಡಿಮೆ ಮಾಡಲು ‘ಇಂಧನ ಸ್ಥಿತಿ ಸ್ಥಾಪಕತ್ವ ಮತ್ತು ಡಿ-ಕಾರ್ಬೊನೈಸೇಶನ್’ ಕೇಂದ್ರಿತವಾಗಿ ಅಂತರರಾಷ್ಟ್ರೀಯ ಜಂಟಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು, ಅಮೃತ ವಿಶ್ವವಿದ್ಯಾಪೀಠಂ ಮತ್ತು ಇಂಗ್ಲೆಂಡ್ನ ಡರ್ಹ್ಯಾಮ್ ವಿಶ್ವವಿದ್ಯಾಲಯಗಳು ಮುಂದಾಗಿವೆ.</p>.<p>ಇಲ್ಲಿನ ಅಮೃತ ವಿಶ್ವವಿದ್ಯಾಪೀಠಂ ಕ್ಯಾಂಪಸ್ನಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿ ಮನೀಷಾ ವಿನೋದಿನಿ ರಮೇಶ್ ಹಾಗೂ ಡರ್ಹ್ಯಾಮ್ ವಿಶ್ವವಿದ್ಯಾಲಯದ ಕುಲಪತಿ ಕ್ಲೇರ್ ಓ ಮ್ಯಾಲಿ ಒಪ್ಪಂದಪತ್ರಕ್ಕೆ ಸಹಿ ಹಾಕಿದರು.</p>.<p>ಈ ವೇಳೆ ಮಾತನಾಡಿದ ಮನೀಷಾ, ‘ಉಭಯ ವಿಶ್ವವಿದ್ಯಾಲಯಗಳು ಜಂಟಿ ಸಂಶೋಧನಾ ಯೋಜನೆ, ನಿರಂತರ ಶಿಕ್ಷಣ ಕಾರ್ಯಕ್ರಮಗಳ ವಿನ್ಯಾಸ ಹಾಗೂ ಅವುಗಳ ಅನುಷ್ಠಾನಕ್ಕೆ ಶ್ರಮಿಸಲಿವೆ. ಡಿಜಿಟಲ್ ಸಂಪನ್ಮೂಲಗಳಿಗೆ ಪರಸ್ಪರ ಹಂಚಿಕೆ, ವೈಜ್ಞಾನಿಕ ಮಾಹಿತಿ ಹಾಗೂ ಪರಿಣಿತಿಯ ವಿನಿಮಯಕ್ಕೆ ಮುಂದಾಗಲಿವೆ’ ಎಂದರು.</p>.<p>ಕ್ಲೇರ್ ಓ ಮ್ಯಾಲಿ ಮಾತನಾಡಿ, ‘ಉಭಯ ವಿವಿಗಳ ಸಹಯೋಗವು ಸಂಶೋಧನೆ ಮತ್ತು ನಾವೀನ್ಯ ಕ್ಷೇತ್ರದಲ್ಲಿ ಹೊಸ ಹೆಜ್ಜೆಗಳನ್ನು ಇರಿಸಲಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಇಂಧನ ಸಮಸ್ಯೆ ನಿವಾರಣೆ ಹಾಗೂ ವಾತಾವರಣದಲ್ಲಿ ಕಾರ್ಬನ್ ಅಂಶವನ್ನು ಕಡಿಮೆ ಮಾಡಲು ‘ಇಂಧನ ಸ್ಥಿತಿ ಸ್ಥಾಪಕತ್ವ ಮತ್ತು ಡಿ-ಕಾರ್ಬೊನೈಸೇಶನ್’ ಕೇಂದ್ರಿತವಾಗಿ ಅಂತರರಾಷ್ಟ್ರೀಯ ಜಂಟಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು, ಅಮೃತ ವಿಶ್ವವಿದ್ಯಾಪೀಠಂ ಮತ್ತು ಇಂಗ್ಲೆಂಡ್ನ ಡರ್ಹ್ಯಾಮ್ ವಿಶ್ವವಿದ್ಯಾಲಯಗಳು ಮುಂದಾಗಿವೆ.</p>.<p>ಇಲ್ಲಿನ ಅಮೃತ ವಿಶ್ವವಿದ್ಯಾಪೀಠಂ ಕ್ಯಾಂಪಸ್ನಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿ ಮನೀಷಾ ವಿನೋದಿನಿ ರಮೇಶ್ ಹಾಗೂ ಡರ್ಹ್ಯಾಮ್ ವಿಶ್ವವಿದ್ಯಾಲಯದ ಕುಲಪತಿ ಕ್ಲೇರ್ ಓ ಮ್ಯಾಲಿ ಒಪ್ಪಂದಪತ್ರಕ್ಕೆ ಸಹಿ ಹಾಕಿದರು.</p>.<p>ಈ ವೇಳೆ ಮಾತನಾಡಿದ ಮನೀಷಾ, ‘ಉಭಯ ವಿಶ್ವವಿದ್ಯಾಲಯಗಳು ಜಂಟಿ ಸಂಶೋಧನಾ ಯೋಜನೆ, ನಿರಂತರ ಶಿಕ್ಷಣ ಕಾರ್ಯಕ್ರಮಗಳ ವಿನ್ಯಾಸ ಹಾಗೂ ಅವುಗಳ ಅನುಷ್ಠಾನಕ್ಕೆ ಶ್ರಮಿಸಲಿವೆ. ಡಿಜಿಟಲ್ ಸಂಪನ್ಮೂಲಗಳಿಗೆ ಪರಸ್ಪರ ಹಂಚಿಕೆ, ವೈಜ್ಞಾನಿಕ ಮಾಹಿತಿ ಹಾಗೂ ಪರಿಣಿತಿಯ ವಿನಿಮಯಕ್ಕೆ ಮುಂದಾಗಲಿವೆ’ ಎಂದರು.</p>.<p>ಕ್ಲೇರ್ ಓ ಮ್ಯಾಲಿ ಮಾತನಾಡಿ, ‘ಉಭಯ ವಿವಿಗಳ ಸಹಯೋಗವು ಸಂಶೋಧನೆ ಮತ್ತು ನಾವೀನ್ಯ ಕ್ಷೇತ್ರದಲ್ಲಿ ಹೊಸ ಹೆಜ್ಜೆಗಳನ್ನು ಇರಿಸಲಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>