<p><strong>ಚಡಚಣ/ಹೊರ್ತಿ:</strong>ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಭಕ್ತರ ಆರಾಧ್ಯ ದೇವರಾದ ವಿಠ್ಠಲ-ರುಕ್ಷ್ಮೀಣಿ ಆಷಾಢ(ದೇವಶಯನಿ ಏಕಾದಶಿ) ನಿಮಿತ್ತ ದರ್ಶನಕ್ಕಾಗಿ ಪಂಢರಪುರದಲ್ಲಿ ಭಾನುವಾರ ಭಕ್ತರ ಮಹಾಪೂರವೇ ಹರಿದು ಬಂದಿತು.</p>.<p>ಜಾತಿ, ಮತ, ಪಂಥಗಳ ಬೇಧವಿಲ್ಲದೇ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ವಿವಿಧ ರಾಜ್ಯಗಳಿಂದ ಸಾಂಪ್ರದಾಯಿಕ ಸಮವಸ್ತ್ರಗಳನ್ನು ಧರಿಸಿ ಆಗಮಿಸಿದ್ದ ದಿಂಡಿ ಯಾತ್ರೆಯ ಮೂಲಕ ಪಂಢರಪುರಕ್ಕೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಆಗಮಿಸಿದ್ದರು.</p>.<p>ಭಗವಾಧ್ವಜ ಹಿಡಿದವಾರಕರಿಗಳು, ತುಳಸಿ ಕಟ್ಟೆ ಹೊತ್ತ ಮಹಿಳೆಯರು ಹಾಗೂ ತಾಳ, ತಂಬೂರಿ ಬಾರಿಸುತ್ತ ವಿಠ್ಠಲ ನಾಮಸ್ಮರಣೆ ಮಾಡುವ ಪಾದಯಾತ್ರೆಗಳ ಗುಂಪು ಎಲ್ಲೆಲ್ಲೂ ಕಂಡುಬಂದಿತು.</p>.<p>ಮಳೆಯನ್ನು ಲೆಕ್ಕಿಸದೆ ಸಂತಸದಿಂದ ದೇವರ ದರ್ಶನ ಪಡೆದು ಜೈಹರಿ ವಿಠ್ಠಲ.. ಶ್ರೀ ಹರಿ ವಿಠ್ಠಲ ಎನ್ನುವ ಜಯಘೋಷದೊಂದಿಗೆ ಭೀಮಾ (ಚಂದ್ರಭಾಗ) ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಕೆಲವರು ವಿಠ್ಠಲ- ರುಕ್ಷ್ಮೀಣಿ ದೇವರ ಪಾದ ದರ್ಶನ ಮಾಡಿದರೆ, ಇನ್ನು ಕೆಲವರು ಮುಖ ದರ್ಶನ, ಇನ್ನಷ್ಟು ಭಕ್ತರು ಕಳಶ ದರ್ಶನ ಮಾಡಿದರೆ, ಇನ್ನುಳಿದ ಬಹುತೇಕರು ನಾಮದೇವ ಪೈರಿ (ಭಕ್ತ ನಾಮದೇವನ ಗದ್ದುಗೆ) ದರ್ಶನ ಪಡೆದರು.</p>.<p>ಏಕಾದಶಿ ನಿಮಿತ್ಯ ಜರುಗಿದ ವಾರಕರಿ ಸಪ್ತಾಹದಲ್ಲಿ ಅನೇಕ ಭಕ್ತರು ಸಂತ ಜ್ಞಾನೇಶ್ವರ, ಏಕನಾಥ, ತುಕಾರಾಮ, ಪುಂಡಲೀಕ ನಾಮದೇವ, ದಾಮಾಜಿ, ಮೀರಬಾಯಿ, ಮುಕ್ತಾಬಾಯಿ, ಕಬೀರದಾಸ, ರಾಮದಾಸ, ತುಳಸಿದಾಸ, ಸೂರದಾಸರ ಅಭಂಗಗಳನ್ನು ರಾಗದಿಂದ ಹಾಡುತ್ತಾ ಭಜನೆ, ನಾಮ ಸಂಕೀರ್ತನೆಗಳಲ್ಲಿ ಮೈ ಮರೆತಿರುವುದು ಕಂಡುಬಂದಿತು.</p>.<p>ಪಂಢರಪುರದಿಂದ ಸುಮಾರು 5 ಕಿ.ಮೀ ದೂರದ ಗೋಪಾಳಪುರದಲ್ಲಿ ಸಂತ ಸಕ್ಕೂಬಾಯಿ ಗೈದಿರುವ ಸೇವಾ ಕಾರ್ಯಗಳ ಚಿತ್ರಣ, ಅವಳು ಬಳಸಿದ ಬೀಸು ಕಲ್ಲಿನಲ್ಲಿ ಬೀಸುವದು, ಕುಟ್ಟುವುದು ಸಾಮಾನ್ಯವಾಗಿತ್ತು. ಅಲ್ಲಿಂದಲೇ ವಿಠ್ಠಲನ ದರ್ಶನಕ್ಕೆ ಹಾಕಲಾದ ಬ್ಯಾರಿಕೇಡ್ ಮೂಲಕ ಸರದಿ ಸಾಲಿನಲ್ಲಿ ಭಕ್ತರು ಸಾಗಿದರು.</p>.<p>8ರಿಂದ 10 ಗಂಟೆಗಳ ಕಾಲ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಈ ಬಾರಿ ಮಂದಿರದಿಂದ ಸುಮಾರು 3ರಿಂದ 4 ಕಿ.ಮೀ ಅಂತರದಿಂದ ದರ್ಶನಕ್ಕಾಗಿ ಭಕ್ತರು ಸಾಲಿನಲ್ಲಿ ನಿಂತಿದ್ದರು.</p>.<p>ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ವಿಠ್ಠಲನ ದರ್ಶನ ಈ ಬಾರಿ ಮುಕ್ತವಾಗಿದ್ದರಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಭಾಗ್ಯ ಪಡೆದರು.</p>.<p>ದಾರಿಯುದ್ದಕ್ಕೂ ವಾರಕರಿಗಳಿಗಾಗಿ ಹಲವಾರು ದಾನಿಗಳು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಅದರಲ್ಲೂ ಕಳೆದ 40 ವರ್ಷಗಳಿಂದ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಮಠದದಾನೇಶ್ವರ ಮಹಾರಾಜರು ನಿತ್ಯ ಸುಮಾರು 2 ಲಕ್ಷ ಭಕ್ತರಿಗೆ ಉತ್ತರ ಕರ್ನಾಟಕದ ಊಟದ ವ್ಯವಸ್ಥೆ ಈ ಬಾರಿಯೂ ಮಾಡಿದ್ದು ವಿಶೇಷವಾಗಿತ್ತು.</p>.<p class="Subhead"><strong>ಚಿನ್ನದ ಮುಕುಟು ಅರ್ಪಣೆ:</strong></p>.<p>ನಾಂದೇಡ್ ಜಿಲ್ಲೆಯ ಉಮರಜ ಗ್ರಾಮದ ಸಮಾಜಸೇವಕ ವಿಜಯಕುಮಾರ ಪಂಢರಿನಾಥ ಉತ್ತರರಾವ್ ಹಾಗು ಜಯಶ್ರೀ ಉತ್ತರರಾವ್ ದಂಪತಿ ಸುಮಾರು ₹1.3 ಕೋಟಿ ಮೊತ್ತದ 1.968 ಕಿ. ಗ್ರಾಂ ಚಿನ್ನದ ಮುಕುಟವನ್ನು ಶ್ರೀ ವಿಠಲ್ಠ- ರುಕ್ಷ್ಮೀಣಿ ದೇವರಿಗೆ ಅರ್ಪಿಸಿದರು.</p>.<p class="Briefhead"><strong>ಶಾಂತಿ, ಸಮೃದ್ಧಿಗೆ ಸಿಎಂ ಪ್ರಾರ್ಥನೆ</strong></p>.<p><strong>ಸೋಲಾಪುರ:</strong>ಏಕಾದಶಿ ನಿಮಿತ್ಯ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಪತ್ನಿ ಲತಾ ಶಿಂಧೆ ದಂಪತಿ ಭಾನುವಾರ ನಸುಕಿನ3.10ಕ್ಕೆ ಬೀಡ್ ತಾಲ್ಲೂಕಿನ ಗೋವರಾಯಿ ಗ್ರಾಮದ ಮುರಳಿ ಭಗವಾನ ನವಲೆ ಹಾಗೂ ಜೀಜಾಬಾಯಿ ನವಲೆ ದಂಪತಿಯ ಜೊತೆಗೂಡಿ ಸರ್ಕಾರಿ ಮಹಾ ಪೂಜೆ ನೆರವೇರಿಸಿದರು.</p>.<p>ವಿಠ್ಠಲ ರುಕ್ಮಿಣಿ ದೇವಸ್ಥಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಏಕನಾಥ ಶಿಂಧೆ, ಸಮಾಜದ ಶಾಂತಿ, ಸಮೃದ್ಧಿ, ಸಂತೋಷ ನೆಲಸಲಿ ಎಂದು ವಿಠೋಬಾನಲ್ಲಿ ಪ್ರಾರ್ಥಿಸಿದೆ ಎಂದು ಹೇಳಿದರು.</p>.<p>ಆಷಾಢ ಏಕಾದಶಿಯ ವಾರಿಗೆ ನೂರಾರು ವರ್ಷಗಳ ಸಂಪ್ರದಾಯವಿದೆ. ದಿಂಡಿಗಳುಹಲವಾರು ವರ್ಷಗಳಿಂದ ಶಿಸ್ತುಬದ್ಧವಾಗಿ ನಡೆಯುತ್ತಿವೆ. ಇದು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಇಂತಹ ವಾರಿಯಲ್ಲಿ ಭಾಗವಹಿಸುವ ಎಲ್ಲರಿಗೂ ಯಾವುದೇ ಕೊರತೆಯಾಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದರು.</p>.<p>ಮುಖ್ಯಮಂತ್ರಿ ಏಕನಾಥ ಶಿಂಧೆ ಕುಟುಂಬಸ್ಥರು, ವಿಠ್ಠಲ ಮಂದಿರ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಡಚಣ/ಹೊರ್ತಿ:</strong>ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಭಕ್ತರ ಆರಾಧ್ಯ ದೇವರಾದ ವಿಠ್ಠಲ-ರುಕ್ಷ್ಮೀಣಿ ಆಷಾಢ(ದೇವಶಯನಿ ಏಕಾದಶಿ) ನಿಮಿತ್ತ ದರ್ಶನಕ್ಕಾಗಿ ಪಂಢರಪುರದಲ್ಲಿ ಭಾನುವಾರ ಭಕ್ತರ ಮಹಾಪೂರವೇ ಹರಿದು ಬಂದಿತು.</p>.<p>ಜಾತಿ, ಮತ, ಪಂಥಗಳ ಬೇಧವಿಲ್ಲದೇ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ವಿವಿಧ ರಾಜ್ಯಗಳಿಂದ ಸಾಂಪ್ರದಾಯಿಕ ಸಮವಸ್ತ್ರಗಳನ್ನು ಧರಿಸಿ ಆಗಮಿಸಿದ್ದ ದಿಂಡಿ ಯಾತ್ರೆಯ ಮೂಲಕ ಪಂಢರಪುರಕ್ಕೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಆಗಮಿಸಿದ್ದರು.</p>.<p>ಭಗವಾಧ್ವಜ ಹಿಡಿದವಾರಕರಿಗಳು, ತುಳಸಿ ಕಟ್ಟೆ ಹೊತ್ತ ಮಹಿಳೆಯರು ಹಾಗೂ ತಾಳ, ತಂಬೂರಿ ಬಾರಿಸುತ್ತ ವಿಠ್ಠಲ ನಾಮಸ್ಮರಣೆ ಮಾಡುವ ಪಾದಯಾತ್ರೆಗಳ ಗುಂಪು ಎಲ್ಲೆಲ್ಲೂ ಕಂಡುಬಂದಿತು.</p>.<p>ಮಳೆಯನ್ನು ಲೆಕ್ಕಿಸದೆ ಸಂತಸದಿಂದ ದೇವರ ದರ್ಶನ ಪಡೆದು ಜೈಹರಿ ವಿಠ್ಠಲ.. ಶ್ರೀ ಹರಿ ವಿಠ್ಠಲ ಎನ್ನುವ ಜಯಘೋಷದೊಂದಿಗೆ ಭೀಮಾ (ಚಂದ್ರಭಾಗ) ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಕೆಲವರು ವಿಠ್ಠಲ- ರುಕ್ಷ್ಮೀಣಿ ದೇವರ ಪಾದ ದರ್ಶನ ಮಾಡಿದರೆ, ಇನ್ನು ಕೆಲವರು ಮುಖ ದರ್ಶನ, ಇನ್ನಷ್ಟು ಭಕ್ತರು ಕಳಶ ದರ್ಶನ ಮಾಡಿದರೆ, ಇನ್ನುಳಿದ ಬಹುತೇಕರು ನಾಮದೇವ ಪೈರಿ (ಭಕ್ತ ನಾಮದೇವನ ಗದ್ದುಗೆ) ದರ್ಶನ ಪಡೆದರು.</p>.<p>ಏಕಾದಶಿ ನಿಮಿತ್ಯ ಜರುಗಿದ ವಾರಕರಿ ಸಪ್ತಾಹದಲ್ಲಿ ಅನೇಕ ಭಕ್ತರು ಸಂತ ಜ್ಞಾನೇಶ್ವರ, ಏಕನಾಥ, ತುಕಾರಾಮ, ಪುಂಡಲೀಕ ನಾಮದೇವ, ದಾಮಾಜಿ, ಮೀರಬಾಯಿ, ಮುಕ್ತಾಬಾಯಿ, ಕಬೀರದಾಸ, ರಾಮದಾಸ, ತುಳಸಿದಾಸ, ಸೂರದಾಸರ ಅಭಂಗಗಳನ್ನು ರಾಗದಿಂದ ಹಾಡುತ್ತಾ ಭಜನೆ, ನಾಮ ಸಂಕೀರ್ತನೆಗಳಲ್ಲಿ ಮೈ ಮರೆತಿರುವುದು ಕಂಡುಬಂದಿತು.</p>.<p>ಪಂಢರಪುರದಿಂದ ಸುಮಾರು 5 ಕಿ.ಮೀ ದೂರದ ಗೋಪಾಳಪುರದಲ್ಲಿ ಸಂತ ಸಕ್ಕೂಬಾಯಿ ಗೈದಿರುವ ಸೇವಾ ಕಾರ್ಯಗಳ ಚಿತ್ರಣ, ಅವಳು ಬಳಸಿದ ಬೀಸು ಕಲ್ಲಿನಲ್ಲಿ ಬೀಸುವದು, ಕುಟ್ಟುವುದು ಸಾಮಾನ್ಯವಾಗಿತ್ತು. ಅಲ್ಲಿಂದಲೇ ವಿಠ್ಠಲನ ದರ್ಶನಕ್ಕೆ ಹಾಕಲಾದ ಬ್ಯಾರಿಕೇಡ್ ಮೂಲಕ ಸರದಿ ಸಾಲಿನಲ್ಲಿ ಭಕ್ತರು ಸಾಗಿದರು.</p>.<p>8ರಿಂದ 10 ಗಂಟೆಗಳ ಕಾಲ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಈ ಬಾರಿ ಮಂದಿರದಿಂದ ಸುಮಾರು 3ರಿಂದ 4 ಕಿ.ಮೀ ಅಂತರದಿಂದ ದರ್ಶನಕ್ಕಾಗಿ ಭಕ್ತರು ಸಾಲಿನಲ್ಲಿ ನಿಂತಿದ್ದರು.</p>.<p>ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ವಿಠ್ಠಲನ ದರ್ಶನ ಈ ಬಾರಿ ಮುಕ್ತವಾಗಿದ್ದರಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಭಾಗ್ಯ ಪಡೆದರು.</p>.<p>ದಾರಿಯುದ್ದಕ್ಕೂ ವಾರಕರಿಗಳಿಗಾಗಿ ಹಲವಾರು ದಾನಿಗಳು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಅದರಲ್ಲೂ ಕಳೆದ 40 ವರ್ಷಗಳಿಂದ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಮಠದದಾನೇಶ್ವರ ಮಹಾರಾಜರು ನಿತ್ಯ ಸುಮಾರು 2 ಲಕ್ಷ ಭಕ್ತರಿಗೆ ಉತ್ತರ ಕರ್ನಾಟಕದ ಊಟದ ವ್ಯವಸ್ಥೆ ಈ ಬಾರಿಯೂ ಮಾಡಿದ್ದು ವಿಶೇಷವಾಗಿತ್ತು.</p>.<p class="Subhead"><strong>ಚಿನ್ನದ ಮುಕುಟು ಅರ್ಪಣೆ:</strong></p>.<p>ನಾಂದೇಡ್ ಜಿಲ್ಲೆಯ ಉಮರಜ ಗ್ರಾಮದ ಸಮಾಜಸೇವಕ ವಿಜಯಕುಮಾರ ಪಂಢರಿನಾಥ ಉತ್ತರರಾವ್ ಹಾಗು ಜಯಶ್ರೀ ಉತ್ತರರಾವ್ ದಂಪತಿ ಸುಮಾರು ₹1.3 ಕೋಟಿ ಮೊತ್ತದ 1.968 ಕಿ. ಗ್ರಾಂ ಚಿನ್ನದ ಮುಕುಟವನ್ನು ಶ್ರೀ ವಿಠಲ್ಠ- ರುಕ್ಷ್ಮೀಣಿ ದೇವರಿಗೆ ಅರ್ಪಿಸಿದರು.</p>.<p class="Briefhead"><strong>ಶಾಂತಿ, ಸಮೃದ್ಧಿಗೆ ಸಿಎಂ ಪ್ರಾರ್ಥನೆ</strong></p>.<p><strong>ಸೋಲಾಪುರ:</strong>ಏಕಾದಶಿ ನಿಮಿತ್ಯ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಪತ್ನಿ ಲತಾ ಶಿಂಧೆ ದಂಪತಿ ಭಾನುವಾರ ನಸುಕಿನ3.10ಕ್ಕೆ ಬೀಡ್ ತಾಲ್ಲೂಕಿನ ಗೋವರಾಯಿ ಗ್ರಾಮದ ಮುರಳಿ ಭಗವಾನ ನವಲೆ ಹಾಗೂ ಜೀಜಾಬಾಯಿ ನವಲೆ ದಂಪತಿಯ ಜೊತೆಗೂಡಿ ಸರ್ಕಾರಿ ಮಹಾ ಪೂಜೆ ನೆರವೇರಿಸಿದರು.</p>.<p>ವಿಠ್ಠಲ ರುಕ್ಮಿಣಿ ದೇವಸ್ಥಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಏಕನಾಥ ಶಿಂಧೆ, ಸಮಾಜದ ಶಾಂತಿ, ಸಮೃದ್ಧಿ, ಸಂತೋಷ ನೆಲಸಲಿ ಎಂದು ವಿಠೋಬಾನಲ್ಲಿ ಪ್ರಾರ್ಥಿಸಿದೆ ಎಂದು ಹೇಳಿದರು.</p>.<p>ಆಷಾಢ ಏಕಾದಶಿಯ ವಾರಿಗೆ ನೂರಾರು ವರ್ಷಗಳ ಸಂಪ್ರದಾಯವಿದೆ. ದಿಂಡಿಗಳುಹಲವಾರು ವರ್ಷಗಳಿಂದ ಶಿಸ್ತುಬದ್ಧವಾಗಿ ನಡೆಯುತ್ತಿವೆ. ಇದು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಇಂತಹ ವಾರಿಯಲ್ಲಿ ಭಾಗವಹಿಸುವ ಎಲ್ಲರಿಗೂ ಯಾವುದೇ ಕೊರತೆಯಾಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದರು.</p>.<p>ಮುಖ್ಯಮಂತ್ರಿ ಏಕನಾಥ ಶಿಂಧೆ ಕುಟುಂಬಸ್ಥರು, ವಿಠ್ಠಲ ಮಂದಿರ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>