ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ‘ದೆಹಲಿ ಚಲೋದಲ್ಲಿ ಭಾಗಿಯಾಗಲು ರಾಜ್ಯದ ನೂರಾರು ರೈತರು ಹೊರಟಿದ್ದರು. ಅವರನ್ನು ಭೋಪಾಲ್ ಬಳಿ ರೈಲಿನಲ್ಲಿ ಮಧ್ಯರಾತ್ರಿ ಹೊತ್ತಿನಲ್ಲಿ ಎಳೆದಾಡಲಾಗಿದೆ. ಈ ವೇಳೆ, ಕೆಲವು ಮಹಿಳೆಯರಿಗೆ ಗಾಯಗಳಾಗಿವೆ. ರೈತರ ಚಳವಳಿ ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸ್ ಬಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಪೊಲೀಸರು ಗೂಂಡಾಗಿರಿ’ ಎಂದು ಕಿಡಿಕಾರಿದರು.