ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ಗುರುಪ್ರಸಾದ್ (35) ಹಾಗೂ ರಶ್ಮಿ (27) ದಂಪತಿಯನ್ನು, ನಾಲ್ಕು ದಿನಗಳ ಅಂತರಲ್ಲಿ ಕೋವಿಡ್ ಬಲಿ ತೆಗೆದುಕೊಂಡಿದೆ. ಈ ದಂಪತಿ ಮಗಳು ಈಗ ಅನಾಥೆ. ರಶ್ಮಿ ಅವರ ತಂಗಿ, ಅದೇ ಊರಿನಲ್ಲಿರುವ ರಮ್ಯಾ ಹಾಗೂ ಅವರ ಪತಿ ಮಹದೇವಸ್ವಾಮಿ ಅವರು ವರ್ಷಾಳನ್ನು ದತ್ತು ತೆಗೆದುಕೊಂಡು ಆರೈಕೆ ಮಾಡುತ್ತಿದ್ದಾರೆ.