ಸರ್ಕಾರವು ಮಸೀದಿ, ಚರ್ಚ್, ಗುರುದ್ವಾರ, ಬಸದಿಗಳಲ್ಲಿ ಕಾಣಿಕೆ ರೂಪದಲ್ಲಿ ಸಲ್ಲಿಕೆಯಾಗುವ ಹಣವನ್ನು ಏಕೆ ಬಳಸುತ್ತಿಲ್ಲ. ಇದನ್ನು ಪ್ರಶ್ನಿಸುವವರು ಯಾರೂ ಇಲ್ಲ. ಆ ಕಾನೂನು ತೆಗೆದು ಹಾಕಿ, ಅವರ ಹಣವನ್ನೂ ಸರ್ಕಾರದ ಉದ್ದೇಶಕ್ಕೆ ಬಳಸಿ. ವಕ್ಫ್ ಬಳಿ ಲಕ್ಷಗಟ್ಟಲೆ ಎಕರೆ ಆಸ್ತಿ ಇದೆ. ಅದನ್ನು ಸರ್ಕಾರ ಏಕೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿಲ್ಲ. ಅದನ್ನು ವಶಕ್ಕೆ ತೆಗೆದುಕೊಂಡು ಕಂದಾಯ ಇಲಾಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.