<p><strong>ಬೆಂಗಳೂರು</strong>: ‘ನಮ್ಮ ದೇವರು, ನಮ್ಮ ಹಣ, ನಮ್ಮ ಹಕ್ಕು’ ಆದ್ದರಿಂದ ಹಿಂದು ದೇವಸ್ಥಾನಗಳ ಹಣವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು. ಆಯಾ ದೇವಸ್ಥಾನಗಳ ಮತ್ತು ಭಕ್ತರ ಅನುಕೂಲಕ್ಕಾಗಿಯೇ ಬಳಸಬೇಕು ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.</p>.<p>ವಿಧಾನಸಭೆಯಲ್ಲಿ ಸೋಮವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ ದೇವಸ್ಥಾನಗಳನ್ನು ನಿಯಂತ್ರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ನಮ್ಮ ದೇವಸ್ಥಾನಗಳ ಹಣವನ್ನು ಮಸೀದಿ, ಚರ್ಚ್ ಇತ್ಯಾದಿಗಳಿಗೆ ಬಳಸಬಾರದು ಎಂದು ಹೇಳಿದರು.</p>.<p>‘ನಮ್ಮ ಭಕ್ತರು ಬೆವರು ಸುರಿಸಿ ದುಡಿದ ಹಣವನ್ನು, ದೇವಸ್ಥಾನದ ಅಭಿವೃದ್ಧಿಗೆಂದು ಭಕ್ತಿಯಿಂದ ಕಾಣಿಕೆ ರೂಪದಲ್ಲಿ ನೀಡುತ್ತಾರೆ. ಆ ಹಣವನ್ನು ದೇವಸ್ಥಾನದ ನಿರ್ವಹಣೆ, ಗೋಶಾಲೆ, ಸಂಸ್ಕೃತ ಪಾಠ ಶಾಲೆಗಾಗಿ ಬಳಸಬೇಕು. ಆದರೆ, ಸರ್ಕಾರ ದೇವಸ್ಥಾನದ ಅಭಿವೃದ್ಧಿಗೆ ಹಣ ಬಳಸುತ್ತಿಲ್ಲ ಎಂದು ದೂರಿದರು.</p>.<p>ಸರ್ಕಾರವು ಮಸೀದಿ, ಚರ್ಚ್, ಗುರುದ್ವಾರ, ಬಸದಿಗಳಲ್ಲಿ ಕಾಣಿಕೆ ರೂಪದಲ್ಲಿ ಸಲ್ಲಿಕೆಯಾಗುವ ಹಣವನ್ನು ಏಕೆ ಬಳಸುತ್ತಿಲ್ಲ. ಇದನ್ನು ಪ್ರಶ್ನಿಸುವವರು ಯಾರೂ ಇಲ್ಲ. ಆ ಕಾನೂನು ತೆಗೆದು ಹಾಕಿ, ಅವರ ಹಣವನ್ನೂ ಸರ್ಕಾರದ ಉದ್ದೇಶಕ್ಕೆ ಬಳಸಿ. ವಕ್ಫ್ ಬಳಿ ಲಕ್ಷಗಟ್ಟಲೆ ಎಕರೆ ಆಸ್ತಿ ಇದೆ. ಅದನ್ನು ಸರ್ಕಾರ ಏಕೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿಲ್ಲ. ಅದನ್ನು ವಶಕ್ಕೆ ತೆಗೆದುಕೊಂಡು ಕಂದಾಯ ಇಲಾಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ನಮ್ಮ ದೇವರು, ನಮ್ಮ ಹಣ, ನಮ್ಮ ಹಕ್ಕು’ ಆದ್ದರಿಂದ ಹಿಂದು ದೇವಸ್ಥಾನಗಳ ಹಣವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು. ಆಯಾ ದೇವಸ್ಥಾನಗಳ ಮತ್ತು ಭಕ್ತರ ಅನುಕೂಲಕ್ಕಾಗಿಯೇ ಬಳಸಬೇಕು ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.</p>.<p>ವಿಧಾನಸಭೆಯಲ್ಲಿ ಸೋಮವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ ದೇವಸ್ಥಾನಗಳನ್ನು ನಿಯಂತ್ರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ನಮ್ಮ ದೇವಸ್ಥಾನಗಳ ಹಣವನ್ನು ಮಸೀದಿ, ಚರ್ಚ್ ಇತ್ಯಾದಿಗಳಿಗೆ ಬಳಸಬಾರದು ಎಂದು ಹೇಳಿದರು.</p>.<p>‘ನಮ್ಮ ಭಕ್ತರು ಬೆವರು ಸುರಿಸಿ ದುಡಿದ ಹಣವನ್ನು, ದೇವಸ್ಥಾನದ ಅಭಿವೃದ್ಧಿಗೆಂದು ಭಕ್ತಿಯಿಂದ ಕಾಣಿಕೆ ರೂಪದಲ್ಲಿ ನೀಡುತ್ತಾರೆ. ಆ ಹಣವನ್ನು ದೇವಸ್ಥಾನದ ನಿರ್ವಹಣೆ, ಗೋಶಾಲೆ, ಸಂಸ್ಕೃತ ಪಾಠ ಶಾಲೆಗಾಗಿ ಬಳಸಬೇಕು. ಆದರೆ, ಸರ್ಕಾರ ದೇವಸ್ಥಾನದ ಅಭಿವೃದ್ಧಿಗೆ ಹಣ ಬಳಸುತ್ತಿಲ್ಲ ಎಂದು ದೂರಿದರು.</p>.<p>ಸರ್ಕಾರವು ಮಸೀದಿ, ಚರ್ಚ್, ಗುರುದ್ವಾರ, ಬಸದಿಗಳಲ್ಲಿ ಕಾಣಿಕೆ ರೂಪದಲ್ಲಿ ಸಲ್ಲಿಕೆಯಾಗುವ ಹಣವನ್ನು ಏಕೆ ಬಳಸುತ್ತಿಲ್ಲ. ಇದನ್ನು ಪ್ರಶ್ನಿಸುವವರು ಯಾರೂ ಇಲ್ಲ. ಆ ಕಾನೂನು ತೆಗೆದು ಹಾಕಿ, ಅವರ ಹಣವನ್ನೂ ಸರ್ಕಾರದ ಉದ್ದೇಶಕ್ಕೆ ಬಳಸಿ. ವಕ್ಫ್ ಬಳಿ ಲಕ್ಷಗಟ್ಟಲೆ ಎಕರೆ ಆಸ್ತಿ ಇದೆ. ಅದನ್ನು ಸರ್ಕಾರ ಏಕೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿಲ್ಲ. ಅದನ್ನು ವಶಕ್ಕೆ ತೆಗೆದುಕೊಂಡು ಕಂದಾಯ ಇಲಾಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>