<p>ರಾಮನಗರ: ಮಾಗಡಿಯ ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿಯ ವಿಡಿಯೊ ಚಾಟ್ ಜಾಲತಾಣಗಳಲ್ಲಿ ಬಹಿರಂಗ ಆಗಿದ್ದು, ಶ್ರೀಗಳ ಜೊತೆ ಮಾತನಾಡಿರುವ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.</p>.<p>ಆರೇಳು ತಿಂಗಳ ಹಿಂದೆ ಭಕ್ತೆಯ ಸೋಗಿನಲ್ಲಿ ಮಹಿಳೆ ಸ್ವಾಮೀಜಿಗೆ ಪರಿಚಯಿಸಿಕೊಂಡಿದ್ದರು. ನಂತರ ಸಲುಗೆ ಬೆಳೆಸಿಕೊಂಡು ಮೊಬೈಲ್ ಸಂಖ್ಯೆ ಪಡೆದಿ ದ್ದರು. ನಂತರದಲ್ಲಿ ಇಬ್ಬರ ನಡುವೆ ವಿಡಿಯೊ ಕರೆಗಳ ಮೂಲಕ ಸಂವಾದ ಹಾಗೂ ಸಲುಗೆ ಬೆಳೆದಿತ್ತು ಎನ್ನಲಾಗಿದೆ.</p>.<p>ಮಹಿಳೆಯೇ ಶ್ರೀಗಳ ಸಂಪರ್ಕ ಬೆಳೆಸಿ, ನಂತರ ಅದನ್ನೇ ಮುಂದಿಟ್ಟುಕೊಂಡು ಹಣಕ್ಕಾಗಿ ಒತ್ತಾಯಿಸಿರಬಹುದು. ಇಲ್ಲವೇ, ಅನ್ಯರು ಮಹಿಳೆಯನ್ನು ಬಳಸಿಕೊಂಡು ಶ್ರೀಗಳನ್ನು ಹನಿಟ್ರ್ಯಾಪ್ ಮಾಡಿರಬಹುದು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿ<br />ದ್ದಾರೆ. ಶ್ರೀಗಳ ಆಪ್ತ ಸಹಾಯಕ, ವಾಹನ ಚಾಲಕ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.</p>.<p>ಶ್ರೀಗಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೂರು ಡೆತ್ನೋಟ್ ಬರೆದಿ ದ್ದರು. ಮೊದಲನೇ ನೋಟ್ ಅಪೂರ್ಣ ವಾಗಿದ್ದು, ಅದು ಸರಿಯಿಲ್ಲವೆಂದು ಕಿಟಕಿಯಿಂದ ಆಚೆಗೆ ಎಸೆದಿದ್ದರು. ಈ ನೋಟ್ ಭಕ್ತರಿಗೆ ಸಿಕ್ಕಿದ್ದು ಜಾಲತಾಣ ಗಳಲ್ಲಿ ಹರಿದಾಡುತ್ತಿದೆ. ಇನ್ನೂ 2 ಡೆತ್ನೋಟ್ ಇದ್ದು, ಒಟ್ಟು 6 ಪುಟಗಳಿವೆ.</p>.<p>ಬಸವಲಿಂಗ ಸ್ವಾಮೀಜಿ ಆತ್ಯಹತ್ಯೆ ನಿರ್ಧಾರದ ಹಿಂದೆ ಮತ್ತೊಬ್ಬ ಸ್ವಾಮೀಜಿಯ ಕುಮ್ಮಕ್ಕು ಇರುವುದಾಗಿ ಸುದ್ದಿ ಹಬ್ಬಿದೆ. ಹನಿಟ್ರ್ಯಾಪ್ ಮಾಡಿಸಲು ಅದಕ್ಕೆ ರಾಜಕಾರಣಿಯೊಬ್ಬರ ಸಹಕಾರವೂ ಇತ್ತು. ನಂತರದಲ್ಲಿ ಸಂಧಾನ ನಡೆದು ಪೀಠತ್ಯಾಗಕ್ಕೆ ಒತ್ತಾಯಿಸಲಾಗಿತ್ತು ಎಂಬ ಸುದ್ದಿಯೂ ಹರಿದಾಡುತ್ತಿದೆ.</p>.<p>ಈ ಮಧ್ಯೆ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಮಠದ ಭಕ್ತರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.<br /><br />****<br />ಸ್ವಾಮೀಜಿ ಬರೆದ 2 ಡೆತ್ ನೋಟ್ಗಳು ಪೊಲೀಸರಿಗೆ ಸಿಕ್ಕಿವೆ. ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದು, ಯಾರನ್ನೂ ವಶಕ್ಕೆ ಪಡೆದಿಲ್ಲ. ವಿಡಿಯೊ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ.<br /><br />-ಸಂತೋಷ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮನಗರ: ಮಾಗಡಿಯ ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿಯ ವಿಡಿಯೊ ಚಾಟ್ ಜಾಲತಾಣಗಳಲ್ಲಿ ಬಹಿರಂಗ ಆಗಿದ್ದು, ಶ್ರೀಗಳ ಜೊತೆ ಮಾತನಾಡಿರುವ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.</p>.<p>ಆರೇಳು ತಿಂಗಳ ಹಿಂದೆ ಭಕ್ತೆಯ ಸೋಗಿನಲ್ಲಿ ಮಹಿಳೆ ಸ್ವಾಮೀಜಿಗೆ ಪರಿಚಯಿಸಿಕೊಂಡಿದ್ದರು. ನಂತರ ಸಲುಗೆ ಬೆಳೆಸಿಕೊಂಡು ಮೊಬೈಲ್ ಸಂಖ್ಯೆ ಪಡೆದಿ ದ್ದರು. ನಂತರದಲ್ಲಿ ಇಬ್ಬರ ನಡುವೆ ವಿಡಿಯೊ ಕರೆಗಳ ಮೂಲಕ ಸಂವಾದ ಹಾಗೂ ಸಲುಗೆ ಬೆಳೆದಿತ್ತು ಎನ್ನಲಾಗಿದೆ.</p>.<p>ಮಹಿಳೆಯೇ ಶ್ರೀಗಳ ಸಂಪರ್ಕ ಬೆಳೆಸಿ, ನಂತರ ಅದನ್ನೇ ಮುಂದಿಟ್ಟುಕೊಂಡು ಹಣಕ್ಕಾಗಿ ಒತ್ತಾಯಿಸಿರಬಹುದು. ಇಲ್ಲವೇ, ಅನ್ಯರು ಮಹಿಳೆಯನ್ನು ಬಳಸಿಕೊಂಡು ಶ್ರೀಗಳನ್ನು ಹನಿಟ್ರ್ಯಾಪ್ ಮಾಡಿರಬಹುದು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿ<br />ದ್ದಾರೆ. ಶ್ರೀಗಳ ಆಪ್ತ ಸಹಾಯಕ, ವಾಹನ ಚಾಲಕ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.</p>.<p>ಶ್ರೀಗಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೂರು ಡೆತ್ನೋಟ್ ಬರೆದಿ ದ್ದರು. ಮೊದಲನೇ ನೋಟ್ ಅಪೂರ್ಣ ವಾಗಿದ್ದು, ಅದು ಸರಿಯಿಲ್ಲವೆಂದು ಕಿಟಕಿಯಿಂದ ಆಚೆಗೆ ಎಸೆದಿದ್ದರು. ಈ ನೋಟ್ ಭಕ್ತರಿಗೆ ಸಿಕ್ಕಿದ್ದು ಜಾಲತಾಣ ಗಳಲ್ಲಿ ಹರಿದಾಡುತ್ತಿದೆ. ಇನ್ನೂ 2 ಡೆತ್ನೋಟ್ ಇದ್ದು, ಒಟ್ಟು 6 ಪುಟಗಳಿವೆ.</p>.<p>ಬಸವಲಿಂಗ ಸ್ವಾಮೀಜಿ ಆತ್ಯಹತ್ಯೆ ನಿರ್ಧಾರದ ಹಿಂದೆ ಮತ್ತೊಬ್ಬ ಸ್ವಾಮೀಜಿಯ ಕುಮ್ಮಕ್ಕು ಇರುವುದಾಗಿ ಸುದ್ದಿ ಹಬ್ಬಿದೆ. ಹನಿಟ್ರ್ಯಾಪ್ ಮಾಡಿಸಲು ಅದಕ್ಕೆ ರಾಜಕಾರಣಿಯೊಬ್ಬರ ಸಹಕಾರವೂ ಇತ್ತು. ನಂತರದಲ್ಲಿ ಸಂಧಾನ ನಡೆದು ಪೀಠತ್ಯಾಗಕ್ಕೆ ಒತ್ತಾಯಿಸಲಾಗಿತ್ತು ಎಂಬ ಸುದ್ದಿಯೂ ಹರಿದಾಡುತ್ತಿದೆ.</p>.<p>ಈ ಮಧ್ಯೆ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಮಠದ ಭಕ್ತರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.<br /><br />****<br />ಸ್ವಾಮೀಜಿ ಬರೆದ 2 ಡೆತ್ ನೋಟ್ಗಳು ಪೊಲೀಸರಿಗೆ ಸಿಕ್ಕಿವೆ. ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದು, ಯಾರನ್ನೂ ವಶಕ್ಕೆ ಪಡೆದಿಲ್ಲ. ವಿಡಿಯೊ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ.<br /><br />-ಸಂತೋಷ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>