<p><strong>ಬೆಂಗಳೂರು:</strong> ಸರ್ಕಾರಿ ಭೂಮಿಯನ್ನು ನೋಂದಣಿ ಮಾಡಿಕೊಡುವ ನೆಪದಲ್ಲಿ ರಾಜ್ಯ ಸರ್ಕಾರವು ಜನರನ್ನು ಲೂಟಿ ಮಾಡುತ್ತಿದೆ. ಆದರೆ ಅದಕ್ಕೆ, ‘ಹಕ್ಕುಪತ್ರ ವಿತರಣೆ’ ಎಂದು ಕರೆಯುತ್ತಿದೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.</p><p>‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಮ್ಮ ಸರ್ಕಾರ ಇದ್ದಾಗ, ಅಕ್ರಮ ಇದ್ದುದ್ದನ್ನು ಸಕ್ರಮ ಮಾಡಿದ್ದೆವು. ಜತೆಗೆ ಸಾಲಸಿಗುವ ವ್ಯವಸ್ಥೆಯನ್ನೂ ಮಾಡಿದ್ದೆವು ಎಂದರು.</p>.<p>ಈಗ ಸರ್ಕಾರವು, ಸರ್ಕಾರಿ ಜಮೀನನ್ನೇ ನೋಂದಣಿ ಮಾಡಿಕೊಳ್ಳಿ ಎಂದು ಹೇಳಿ ಬಡ ಕುಟುಂಬದ ಮೇಲೆ ಮೂರು–ನಾಲ್ಕು ಲಕ್ಷ ರೂಪಾಯಿ ಹೊರೆ ಹೇರಿದೆ’ ಎಂದಿದ್ದಾರೆ.</p><p>‘ಗ್ರಾಮೀಣ ಪ್ರದೇಶದಲ್ಲಿ ಹಕ್ಕುಪತ್ರ ವಿತರಣಾ ಸಮಾವೇಶ ಮಾಡಿದರೆ, ಜನರು ಬರುವುದಿಲ್ಲ ಎಂದು ಇವರಿಗೆ ಗೊತ್ತು. ಹೀಗಾಗಿ ಹಳ್ಳಿಗಾಡಿನಲ್ಲಿ ಸಮಾವೇಶ ಮಾಡಿದ್ದಾರೆ. ಇದು ಶೂನ್ಯ ಸಾಧನೆಯ, ಭ್ರಷ್ಟಾಚಾರದ ಸಮಾವೇಶ’ ಎಂದು ಟೀಕಿಸಿದ್ದಾರೆ.</p>.ಸಾಧನಾ ಸಮಾವೇಶ: 2028ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ 141ಸೀಟು; ಡಿ.ಕೆ.ಶಿವಕುಮಾರ್.ಸಾಧನಾ ಸಮಾವೇಶ: ಲಕ್ಷ ಜನರಿಗೆ ಭೂ ಹಕ್ಕುಪತ್ರ ವಿತರಣೆಗೆ ಸಜ್ಜು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸರ್ಕಾರಿ ಭೂಮಿಯನ್ನು ನೋಂದಣಿ ಮಾಡಿಕೊಡುವ ನೆಪದಲ್ಲಿ ರಾಜ್ಯ ಸರ್ಕಾರವು ಜನರನ್ನು ಲೂಟಿ ಮಾಡುತ್ತಿದೆ. ಆದರೆ ಅದಕ್ಕೆ, ‘ಹಕ್ಕುಪತ್ರ ವಿತರಣೆ’ ಎಂದು ಕರೆಯುತ್ತಿದೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.</p><p>‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಮ್ಮ ಸರ್ಕಾರ ಇದ್ದಾಗ, ಅಕ್ರಮ ಇದ್ದುದ್ದನ್ನು ಸಕ್ರಮ ಮಾಡಿದ್ದೆವು. ಜತೆಗೆ ಸಾಲಸಿಗುವ ವ್ಯವಸ್ಥೆಯನ್ನೂ ಮಾಡಿದ್ದೆವು ಎಂದರು.</p>.<p>ಈಗ ಸರ್ಕಾರವು, ಸರ್ಕಾರಿ ಜಮೀನನ್ನೇ ನೋಂದಣಿ ಮಾಡಿಕೊಳ್ಳಿ ಎಂದು ಹೇಳಿ ಬಡ ಕುಟುಂಬದ ಮೇಲೆ ಮೂರು–ನಾಲ್ಕು ಲಕ್ಷ ರೂಪಾಯಿ ಹೊರೆ ಹೇರಿದೆ’ ಎಂದಿದ್ದಾರೆ.</p><p>‘ಗ್ರಾಮೀಣ ಪ್ರದೇಶದಲ್ಲಿ ಹಕ್ಕುಪತ್ರ ವಿತರಣಾ ಸಮಾವೇಶ ಮಾಡಿದರೆ, ಜನರು ಬರುವುದಿಲ್ಲ ಎಂದು ಇವರಿಗೆ ಗೊತ್ತು. ಹೀಗಾಗಿ ಹಳ್ಳಿಗಾಡಿನಲ್ಲಿ ಸಮಾವೇಶ ಮಾಡಿದ್ದಾರೆ. ಇದು ಶೂನ್ಯ ಸಾಧನೆಯ, ಭ್ರಷ್ಟಾಚಾರದ ಸಮಾವೇಶ’ ಎಂದು ಟೀಕಿಸಿದ್ದಾರೆ.</p>.ಸಾಧನಾ ಸಮಾವೇಶ: 2028ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ 141ಸೀಟು; ಡಿ.ಕೆ.ಶಿವಕುಮಾರ್.ಸಾಧನಾ ಸಮಾವೇಶ: ಲಕ್ಷ ಜನರಿಗೆ ಭೂ ಹಕ್ಕುಪತ್ರ ವಿತರಣೆಗೆ ಸಜ್ಜು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>