<p><strong>ಬೆಂಗಳೂರು</strong>: ‘ಮೈಸೂರು ಸ್ಯಾಂಡಲ್ ಸಾಬೂನು ಕಾರ್ಖಾನೆಯಲ್ಲಿ ಆಧುನಿಕ ಯಂತ್ರೋಪಕರಣ ಅಳವಡಿಸಿಕೊಳ್ಳುವ ಜತೆಗೆ ಮಾರುಕಟ್ಟೆ ವ್ಯವಸ್ಥೆಗೆ ಡಿಜಿಟಲ್ ಸ್ಪರ್ಶ ನೀಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.</p>.<p>ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ಆವರಣದಲ್ಲಿ ಸೋಮವಾರ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಶ್ರೀಗಂಧವನ ಉದ್ಘಾಟಿಸಿ ಮಾತನಾಡಿದರು.</p>.<p>ಹೊಸ ಚಿಂತನೆ, ಹೊಸ ವ್ಯವಸ್ಥೆ ಅಡಿ ಸಂಸ್ಥೆಯು ಉತ್ಪನ್ನ ತಯಾರಿಸಿದರೆ ಮನೆಮನೆಗೂ ತಲುಪಲು ಸಾಧ್ಯ ಆಗಲಿದೆ. ಇದು ಪೈಪೋಟಿಯ ಯುಗ. ಹಿಂದೂಸ್ಥಾನ್ ಯುನಿಲಿವರ್ ಕಂಪನಿ<br />ಯೊಂದೇ ಶೇ 65ರಷ್ಟು ಮಾರುಕಟ್ಟೆ ವ್ಯಾಪ್ತಿ ಹೊಂದಿದೆ. ಮೈಸೂರು ಸ್ಯಾಂಡಲ್ ಸೇರಿ ಉಳಿದ ಸಾಬೂನು ತಯಾರಿಕಾ ಕಂಪನಿಗಳಿಗೆ ಶೇ 35 ಮಾರುಕಟ್ಟೆ ಪಾಲಿದೆ. ಒಂದು ಕಾಲದಲ್ಲಿ ನಿರ್ಮಾ ಸಂಸ್ಥೆಯೇ ಹಿಂದೂಸ್ಥಾನ್ ಯುನಿ ಲಿವರ್ಗೆ ಸ್ಪರ್ಧೆ ಒಡ್ಡಿತ್ತು ಎಂದರು.</p>.<p>ಮೈಸೂರು ಸ್ಯಾಂಡಲ್ ಕಾರ್ಖಾ<br />ನೆಯು ಸರ್ಕಾರಿ ಸ್ವಾಮ್ಯದಲ್ಲಿ ಲಾಭದಾಯ<br />ಕವಾಗಿ ಮುನ್ನಡೆಯುತ್ತಿದ್ದರೂ ಉತ್ಪನ್ನ<br />ಗಳ ತಯಾರಿಕೆಯಲ್ಲಿ ಮತ್ತಷ್ಟು ವೃತ್ತಿಪರತೆ ಅಗತ್ಯ. ಶ್ರೀಗಂಧದ ದ್ರವ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.</p>.<p>ಸರ್ಕಾರದ ವಿಶೇಷ ವಲಯದಲ್ಲಿ ಖಾಸಗಿ ಸಂಸ್ಥೆಗಳೇ ಉತ್ಪಾದನಾ ಘಟಕ ಆರಂಭಿಸುತ್ತಿವೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯೂ ಅಲ್ಲಿ ಉತ್ಪನ್ನ ತಯಾರಿಕೆ ಘಟಕ ಸ್ಥಾಪಿಸಿ, ಪ್ರತಿ ವರ್ಷ ₹ 10 ಸಾವಿರ ಕೋಟಿ ವಹಿವಾಟು ನಡೆಸಬೇಕು ಎಂದ ಅವರು, ’ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಿದ ಸಂಸ್ಥೆಗಳಿಗೆ ಸಹಾಯಧನ ನೀಡಲಾಗುವುದು. ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳು ಲಭಿಸಬೇಕು’ ಎಂದರು.</p>.<p class="Subhead">ಒಳಗೆ ಏನ್ ನಡೆಯುತ್ತಿದೆ ತಿಳಿದಿದೆ:<br />‘ಕಾರ್ಖಾನೆಯ ಒಳಗೆ ಏನೆಲ್ಲಾ ನಡೆಯು<br />ತ್ತಿದೆ ಎಂಬುದು ನನಗೆ ತಿಳಿದಿದೆ. ಪ್ರಾಮಾ<br />ಣಿಕತೆ ಹಾಗೂ ಬದಲಾವಣೆ ತರವುದು ಅಗತ್ಯ. ಮಾಡಾಳ್ ವಿರೂಪಾಕ್ಷಪ್ಪ ಅವರು ಒಂದೂವರೆ ವರ್ಷದಿಂದೀಚೆಗೆ ಅಧ್ಯಕ್ಷರಾಗಿದ್ದಾರೆ. ಸರ್ಕಾರ ಎಲ್ಲ ನೆರವೂ ನೀಡಲಿದೆ’ ಎಂದು ಬೊಮ್ಮಾಯಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಮೈಸೂರು ಸ್ಯಾಂಡಲ್ ಸಾಬೂನು ಕಾರ್ಖಾನೆಯಲ್ಲಿ ಆಧುನಿಕ ಯಂತ್ರೋಪಕರಣ ಅಳವಡಿಸಿಕೊಳ್ಳುವ ಜತೆಗೆ ಮಾರುಕಟ್ಟೆ ವ್ಯವಸ್ಥೆಗೆ ಡಿಜಿಟಲ್ ಸ್ಪರ್ಶ ನೀಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.</p>.<p>ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ಆವರಣದಲ್ಲಿ ಸೋಮವಾರ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಶ್ರೀಗಂಧವನ ಉದ್ಘಾಟಿಸಿ ಮಾತನಾಡಿದರು.</p>.<p>ಹೊಸ ಚಿಂತನೆ, ಹೊಸ ವ್ಯವಸ್ಥೆ ಅಡಿ ಸಂಸ್ಥೆಯು ಉತ್ಪನ್ನ ತಯಾರಿಸಿದರೆ ಮನೆಮನೆಗೂ ತಲುಪಲು ಸಾಧ್ಯ ಆಗಲಿದೆ. ಇದು ಪೈಪೋಟಿಯ ಯುಗ. ಹಿಂದೂಸ್ಥಾನ್ ಯುನಿಲಿವರ್ ಕಂಪನಿ<br />ಯೊಂದೇ ಶೇ 65ರಷ್ಟು ಮಾರುಕಟ್ಟೆ ವ್ಯಾಪ್ತಿ ಹೊಂದಿದೆ. ಮೈಸೂರು ಸ್ಯಾಂಡಲ್ ಸೇರಿ ಉಳಿದ ಸಾಬೂನು ತಯಾರಿಕಾ ಕಂಪನಿಗಳಿಗೆ ಶೇ 35 ಮಾರುಕಟ್ಟೆ ಪಾಲಿದೆ. ಒಂದು ಕಾಲದಲ್ಲಿ ನಿರ್ಮಾ ಸಂಸ್ಥೆಯೇ ಹಿಂದೂಸ್ಥಾನ್ ಯುನಿ ಲಿವರ್ಗೆ ಸ್ಪರ್ಧೆ ಒಡ್ಡಿತ್ತು ಎಂದರು.</p>.<p>ಮೈಸೂರು ಸ್ಯಾಂಡಲ್ ಕಾರ್ಖಾ<br />ನೆಯು ಸರ್ಕಾರಿ ಸ್ವಾಮ್ಯದಲ್ಲಿ ಲಾಭದಾಯ<br />ಕವಾಗಿ ಮುನ್ನಡೆಯುತ್ತಿದ್ದರೂ ಉತ್ಪನ್ನ<br />ಗಳ ತಯಾರಿಕೆಯಲ್ಲಿ ಮತ್ತಷ್ಟು ವೃತ್ತಿಪರತೆ ಅಗತ್ಯ. ಶ್ರೀಗಂಧದ ದ್ರವ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.</p>.<p>ಸರ್ಕಾರದ ವಿಶೇಷ ವಲಯದಲ್ಲಿ ಖಾಸಗಿ ಸಂಸ್ಥೆಗಳೇ ಉತ್ಪಾದನಾ ಘಟಕ ಆರಂಭಿಸುತ್ತಿವೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯೂ ಅಲ್ಲಿ ಉತ್ಪನ್ನ ತಯಾರಿಕೆ ಘಟಕ ಸ್ಥಾಪಿಸಿ, ಪ್ರತಿ ವರ್ಷ ₹ 10 ಸಾವಿರ ಕೋಟಿ ವಹಿವಾಟು ನಡೆಸಬೇಕು ಎಂದ ಅವರು, ’ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಿದ ಸಂಸ್ಥೆಗಳಿಗೆ ಸಹಾಯಧನ ನೀಡಲಾಗುವುದು. ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳು ಲಭಿಸಬೇಕು’ ಎಂದರು.</p>.<p class="Subhead">ಒಳಗೆ ಏನ್ ನಡೆಯುತ್ತಿದೆ ತಿಳಿದಿದೆ:<br />‘ಕಾರ್ಖಾನೆಯ ಒಳಗೆ ಏನೆಲ್ಲಾ ನಡೆಯು<br />ತ್ತಿದೆ ಎಂಬುದು ನನಗೆ ತಿಳಿದಿದೆ. ಪ್ರಾಮಾ<br />ಣಿಕತೆ ಹಾಗೂ ಬದಲಾವಣೆ ತರವುದು ಅಗತ್ಯ. ಮಾಡಾಳ್ ವಿರೂಪಾಕ್ಷಪ್ಪ ಅವರು ಒಂದೂವರೆ ವರ್ಷದಿಂದೀಚೆಗೆ ಅಧ್ಯಕ್ಷರಾಗಿದ್ದಾರೆ. ಸರ್ಕಾರ ಎಲ್ಲ ನೆರವೂ ನೀಡಲಿದೆ’ ಎಂದು ಬೊಮ್ಮಾಯಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>