ಲಂಡನ್ನ ಬಸವ ಬಳಗದ ವತಿಯಿಂದ ಕನ್ನಡಿಗರಾದ ಲಂಡನ್ನಿನ ಮಾಜಿ ಮೇಯರ್ ಹಾಗೂ ಬಸವ ಪ್ರತಿಮೆ ಪ್ರತಿಷ್ಠಾಪನೆಯ ರೂವಾರಿ ಡಾ.ನೀರಜ್ ಪಾಟೀಲ ಸ್ವಾಗತಿಸಿ ಮಾತನಾಡಿ, ‘ನಾವು ಕನ್ನಡಿಗರು ಎಂದು ಎನಿಸಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನಾವು ಎಲ್ಲೇ ಇದ್ದರೂ ನಮ್ಮ ನೆಲ, ಜಲ, ಭಾಷೆ ನಮ್ಮ ಪೂರ್ವಿಕರನ್ನು ನಿತ್ಯ ಸ್ಮರಿಸಿಕೊಂಡೆ ನಮ್ಮ ದೈನಂದಿನ ಕೆಲಸಗಳನ್ನು ಇಲ್ಲಿ ಮಾಡುತ್ತಿದ್ದೇವೆ. ನಮ್ಮ ದೇಹ ಇಲ್ಲಿದ್ದರೂ ನಮ್ಮ ಮನಸೆಲ್ಲಾ ಕನ್ನಡದ ನೆಲದಲ್ಲಿಯೇ ಹರಿದಾಡುತ್ತಿದೆ’ ಎಂದರು.