<p><strong>ಬೆಂಗಳೂರು:</strong> 'ಯಾವುದೇ ಕಾರಣಕ್ಕೂ ನಕಲಿ ಬಿತ್ತನೆ ಬೀಜ, ಗೊಬ್ಬರ ಮಾರಾಟ ಆಗಬಾರದು. ರೈತರಿಗೆ ಮೋಸ ಆಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಿ' ಎಂದು ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚಿಸಿದರು.</p>.<p>ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳ ಸಭೆ ನಡೆಸಿದ ಅವರು, 'ರೈತರಿಗೆ ತೊಂದರೆ, ಅನಾಹುತ ಆಗುವ ಮೊದಲೇ ಎಚ್ಚರ ವಹಿಸಿ. ಕೃಷಿ ಜಾಗೃತವಕೋಶವನ್ನುಮತ್ತಷ್ಟು ಚುರುಕುಗೊಳಿಸಲಾಗುವುದು. ಇಲಿ ಹಿಡಿಯದೇ ಹುಲಿಗೆ ಗುರಿ ಇಡಬೇಕು' ಎಂದರು.</p>.<p>'ಮಾರ್ಕೆಟಿಂಗ್ ಪರವಾನಗಿ ಇಲ್ಲದೇ ಯಾವುದೇ ಉತ್ಪನ್ನ ಮಾರುವಂತಿಲ್ಲ. ಕಂಪನಿ ಎಷ್ಟೇ ದೊಡ್ಡದಾದರೂ ನೋಟಿಸ್ ನೀಡಿ. ನಕಲಿ ಮಾರಾಟ ಜಾಲದ ಬುಡವನ್ನೇ ಕತ್ತರಿಸಿ' ಎಂದೂ ಅಧಿಕಾರಿಗಳಿಗೆ ಹೇಳಿದರು.</p>.<p>'ನಕಲಿ ಬೀಜ ಗೊಬ್ಬರ ಮಾರಾಟ ತಡೆಗೆ ಕೃಷಿ ವಿಚಕ್ಷಣಾ ದಳವನ್ನು ವಿಸ್ತರಿಸಲಾಗುವುದು. ಹೊಸದಾಗಿ ಎರಡು ವಿಚಕ್ಷಣಾ ದಳದಕಚೇರಿ ಕಲಬುರಗಿ ಮತ್ತು ಮೈಸೂರುಜಿಲ್ಲೆಗಳಲ್ಲಿ ಆರಂಭವಾಗಲಿದ್ದು, ಮೈಸೂರಿನಲ್ಲಿ ಜುಲೈ 5ರಂದು ಕಚೇರಿ ಆರಂಭವಾಗಲಿದೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> 'ಯಾವುದೇ ಕಾರಣಕ್ಕೂ ನಕಲಿ ಬಿತ್ತನೆ ಬೀಜ, ಗೊಬ್ಬರ ಮಾರಾಟ ಆಗಬಾರದು. ರೈತರಿಗೆ ಮೋಸ ಆಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಿ' ಎಂದು ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚಿಸಿದರು.</p>.<p>ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳ ಸಭೆ ನಡೆಸಿದ ಅವರು, 'ರೈತರಿಗೆ ತೊಂದರೆ, ಅನಾಹುತ ಆಗುವ ಮೊದಲೇ ಎಚ್ಚರ ವಹಿಸಿ. ಕೃಷಿ ಜಾಗೃತವಕೋಶವನ್ನುಮತ್ತಷ್ಟು ಚುರುಕುಗೊಳಿಸಲಾಗುವುದು. ಇಲಿ ಹಿಡಿಯದೇ ಹುಲಿಗೆ ಗುರಿ ಇಡಬೇಕು' ಎಂದರು.</p>.<p>'ಮಾರ್ಕೆಟಿಂಗ್ ಪರವಾನಗಿ ಇಲ್ಲದೇ ಯಾವುದೇ ಉತ್ಪನ್ನ ಮಾರುವಂತಿಲ್ಲ. ಕಂಪನಿ ಎಷ್ಟೇ ದೊಡ್ಡದಾದರೂ ನೋಟಿಸ್ ನೀಡಿ. ನಕಲಿ ಮಾರಾಟ ಜಾಲದ ಬುಡವನ್ನೇ ಕತ್ತರಿಸಿ' ಎಂದೂ ಅಧಿಕಾರಿಗಳಿಗೆ ಹೇಳಿದರು.</p>.<p>'ನಕಲಿ ಬೀಜ ಗೊಬ್ಬರ ಮಾರಾಟ ತಡೆಗೆ ಕೃಷಿ ವಿಚಕ್ಷಣಾ ದಳವನ್ನು ವಿಸ್ತರಿಸಲಾಗುವುದು. ಹೊಸದಾಗಿ ಎರಡು ವಿಚಕ್ಷಣಾ ದಳದಕಚೇರಿ ಕಲಬುರಗಿ ಮತ್ತು ಮೈಸೂರುಜಿಲ್ಲೆಗಳಲ್ಲಿ ಆರಂಭವಾಗಲಿದ್ದು, ಮೈಸೂರಿನಲ್ಲಿ ಜುಲೈ 5ರಂದು ಕಚೇರಿ ಆರಂಭವಾಗಲಿದೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>