ತುಮಕೂರು: ತೋವಿನಕೆರೆ ಸಮೀಪದ ಜುಂಜರಾಮನಹಳ್ಳಿ ಜನಾರ್ದನ ಅವರ ಪಾಳು ಬಾವಿಗೆ ಮಂಗಳವಾರ ರಾತ್ರಿ ಕರಡಿ ಬಿದ್ದಿದೆ.
ಬಾವಿಯ ಹತ್ತಿರ ಜೇನು ಗೂಡು ಕಟ್ಟಿದ್ದು,ಜೇನು ತಿನ್ನಲು ಹೋಗಿ ಬಾವಿಯ ಒಳಗಡೆ ಬಿದ್ದಿದೆ. ಬಾವಿ ಇಪ್ಪತ್ತು ಅಡಿ ಅಳವಿದೆ.
ಕರಡಿಯನ್ನು ಹಿಡಿದು ಮೇಲೆ ತರಲು ಬನ್ನೇರುಘಟ್ಟ ಅಥವಾ ಹಾಸನದಿಂದ ತಂಡ ಕರೆಸಲಾಗುತ್ತದೆ ಎಂದು ಎಸಿಎಫ್ ನಾಗರಾಜು ದೂರವಾಣಿ ಮೂಲಕ ತಿಳಿಸಿದರು.
ಸ್ಥಳದಲ್ಲಿ ಅರ್.ಎಫ್.ಓ ಸುಭಾಷ್ ಚಂದ್ರ,ನಾಗರಾಜು ಹಾಗೂ ಸಿಬ್ಬಂದಿ ಇದ್ದಾರೆ. ಕರಡಿ ನೋಡಲು ನೂರಾರು ಜನರು ಬರುತ್ತಿದ್ದಾರೆ. ತೋವಿನಕೆರೆ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಎಂಟತ್ತು ಜನರ ಮೇಲೆ ಕರಡಿಗಳು ದಾಳಿ ನಡೆಸಿವೆ.