82 ವರ್ಷಗಳಿಂದಲೂ ದಸರೆಯ ಮುನ್ನಾ ದಿನ ಜಂಬೂ ಸವಾರಿಗೂ ಮೊದಲು ಈ ದರ್ಗಾಕ್ಕೆ ಆನೆಗಳು ಭೇಟಿ ನೀಡುತ್ತಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಯೊಂದಕ್ಕೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದ ನಂತರ ಚೇತರಿಸಿಕೊಂಡಿತು. ಹೀಗಾಗಿ ರಾಜರ ಆಣತಿಯಂತೆ ಅಂದಿನಿಂದ ಇಂದಿನವರೆಗೂ ಆನೆಗಳು ನಿರಂತರವಾಗಿ ಪ್ರತಿ ದಸರೆಯಲ್ಲೂ ಬರುತ್ತಿವೆ.