ಸಂಭಾಷಣೆಯಲ್ಲಿ ಏನಿದೆ?: ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಈ ಸಂಭಾಷಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ‘ನೇಮಕಾತಿಗೆ ಸರ್ಕಾರದ ಒಪ್ಪಿಗೆ ಪಡೆಯಲು ಚಾಮುಲ್ ಅಧ್ಯಕ್ಷರು ಸಚಿವರಾದ ಸಾ.ರಾ.ಮಹೇಶ್ ಹಾಗೂ ಬಂಡೆಪ್ಪ ಕಾಶಂಪುರ ಅವರಿಗೆ ₹ 2 ಕೋಟಿ ನೀಡಿದ್ದಾರೆ. ಒಂದೊಂದು ಹುದ್ದೆಗೆ ₹ 5 ಲಕ್ಷ, ₹ 10 ಲಕ್ಷ, ₹ 15 ಲಕ್ಷ... ಹೀಗೆ ಕೊಡಲಾಗಿದೆ. ಮೇಲ್ಮಟ್ಟದಲ್ಲಿ ₹ 2 ಕೋಟಿ ನೀಡಲಾಗಿದೆ. ಅದನ್ನು ಯಾರು ಕೊಡುತ್ತಾರೆ?’ ಎಂದು ನಿರ್ದೇಶಕ ಹೇಳುತ್ತಿರುವುದು ಆಡಿಯೊದಲ್ಲಿದೆ.