ಹೊಸನಗರ/ ಬೈಂದೂರು: ‘ಕೇವಲ 4 ತಿಂಗಳ ಅವಧಿಗೆ ಉಪಚುನಾವಣೆ ಬೇಡವಾಗಿತ್ತು. ಆದರೆ ಸಂವಿಧಾನದ ಅನುಸಾರ ನಡೆಯಬೇಕು. ಚುನಾವಣಾ ವೆಚ್ಚಕ್ಕೆ ಕಡಿವಾಣ ಹಾಕಲು, ಅದನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು.