ಹುಬ್ಬಳ್ಳಿ: ಹೃದಯಾಘಾತದಿಂದ ನಿಧನರಾದ ಸಚಿವ ಸಿ.ಎಸ್. ಶಿವಳ್ಳಿ ಅವರ ಅಂತ್ಯ ಸಂಸ್ಕಾರಕ್ಕೆ ಅವರ ಹುಟ್ಟೂರು ಯರಗುಪ್ಪಿಯಲ್ಲಿ ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಅಂತಿಮ ನಮನ ಸಲ್ಲಿಸಲಿದ್ದಾರೆ. ಶಿವಳ್ಳಿ ಅವರ ಸಾವಿರಾರು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಸಿ.ಎಸ್. ಶಿವಳ್ಳಿ ಅವರ ಪುತ್ರಿ,ಹುಬ್ಬಳ್ಳಿಯಕೆ.ಎಲ್.ಇ. ಇಂಗ್ಲಿಷ್ಶಾಲೆಯಲ್ಲಿ ಓದುತ್ತಿರುವ ರೂಪ ಶಿವಳ್ಳಿ ನಗರದಚೇತನಾ ಕಾಲೊನಿಯಲ್ಲಿರುವ ಸೇಂಟ್ ಅಂಟೋನಿ ಶಾಲೆಯಲ್ಲಿ ಶನಿವಾರ ಎಸ್.ಎಸ್.ಎಲ್.ಸಿಇಂಗ್ಲೀಷ್ಪರೀಕ್ಷೆ ಬರೆದರು.