<p>ಬೆಂಗಳೂರು: ‘ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ಸಲ್ಲಿಸಿರುವ ವರದಿಯಲ್ಲಿರುವ ಜಾತಿವಾರು ವರ್ಗೀಕರಣವನ್ನು ಪರಿಷ್ಕರಿಸಿ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದು ಸೂಕ್ತ’ ಎಂದು ಸಮಾಜ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದೆ.</p>.<p>ಆಯೋಗ ಸಲ್ಲಿಸಿರುವ ವರದಿಯ ಕುರಿತು ಚರ್ಚಿಸಲು ಮಂಗಳವಾರ (ಆಗಸ್ಟ್ 19) ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಗೆ ಇಲಾಖೆ ಸಲ್ಲಿಸಿರುವ ‘ರಹಸ್ಯ ಟಿಪ್ಪಣಿ’ಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಟಿಪ್ಪಣಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.</p>.<p>‘ವರ್ಗೀಕರಣದ ಬಗ್ಗೆ ವಿಸ್ತಾರವಾಗಿ ಚರ್ಚಿಸುವ ಅಗತ್ಯವಿದೆ’ ಎಂದು ಇಲಾಖೆ ತನ್ನ ಟಿಪ್ಪಣಿಯಲ್ಲಿ ಪ್ರತಿಪಾದಿಸಿರುವುದರಿಂದಾಗಿ, ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಳ್ಳಬಹುದಾದ ನಿರ್ಣಯದ ಬಗ್ಗೆ ಎಲ್ಲರ ಚಿತ್ತ ನಿಟ್ಟಿದೆ. ಆಯೋಗ ಈಗಾಗಲೇ ಹಂಚಿಕೆ ಮಾಡಿರುವ ‘ಮೀಸಲು’ ಪ್ರಮಾಣ ಬದಲಾಗುವ ಸಾಧ್ಯತೆಯಿದೆ ಎಂದೂ ಮೂಲಗಳು ಹೇಳಿವೆ.</p>.<p><strong>ಟಿಪ್ಪಣಿಯಲ್ಲಿ ಏನಿದೆ?</strong></p>.<p>2011ರ ಜನಗಣತಿಯಂತೆ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಪರಿಶಿಷ್ಟ ಜಾತಿ ಎಂದು ನಮೂದಿಸಿರುವವರ ಒಟ್ಟು ಜನಸಂಖ್ಯೆ 44.67 ಲಕ್ಷ (ಶೇ 43.63). ಪ್ರಸ್ತುತ ಸಮೀಕ್ಷೆಯಲ್ಲಿ 4,75,954ರಷ್ಟು ಜನರು ಅವರ ಮೂಲ ಜಾತಿಯನ್ನು ತಿಳಿಸಿಲ್ಲ. ಈ ಜನಸಂಖ್ಯೆಯನ್ನು ಪ್ರವರ್ಗ ‘ಇ’ ಎಂದು ವಿಂಗಡಿಸಿ ಶೇಕಡಾ 1 ಮೀಸಲಾತಿಯನ್ನು ಆಯೋಗದ ವರದಿಯಲ್ಲಿ ಹಂಚಿಕೆ ಮಾಡಲು ಶಿಫಾರಸು ಮಾಡಲಾಗಿದೆ. ಮೂಲ ಜಾತಿಯನ್ನು ತಿಳಿಸದೇ ಇರುವ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜಾತಿಗಳನ್ನು ಒಂದು ಗುಂಪಾಗಿ ವಿಂಗಡಿಸಿ ಶೇ 1 ರಷ್ಟು ಮೀಸಲಾತಿ ನೀಡಿದರೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರವೇಶ ಪಡೆಯುವಾಗ ‘ಡುಪ್ಲಿಕೇಟ್’ ಆಗಬಹುದು. ಈ ಜನರು ಇತರ ನಾಲ್ಕು ಗುಂಪುಗಳಲ್ಲಿಯೂ (ಪ್ರವರ್ಗ ಎ, ಬಿ, ಸಿ ಮತ್ತು ಡಿ) ಮೀಸಲಾತಿ ಪಡೆಯುವ ಸಂಭವ ಇರುತ್ತದೆ.</p>.<p>ಆಯೋಗದ ವರದಿಯ ಅನ್ವಯ ಪ್ರವರ್ಗ ‘ಎ’ ಗುಂಪುಗಳಿಗೆ ಶೇ 1ರಷ್ಟು ಮೀಸಲಾತಿ ಹಂಚಿಕೆಯಾಗಿದೆ. ಈ ಶೇ 1ರಷ್ಟು ಮೀಸಲಾತಿಯನ್ನು 100 ರೋಸ್ಟರ್ ಬಿಂದುಗಳಲ್ಲಿ (ನೇಮಕಾತಿ ಮತ್ತು ಬಡ್ತಿ ನೀಡುವ ವೇಳೆ ಮೀಸಲಾತಿ ಬಿಂದುಗಳನ್ನು ಗುರುತಿಸುವ ಪಟ್ಟಿ) ಗುರುತಿಸಿ ಅನುಷ್ಠಾನ ಮಾಡಿದರೂ ಈ ಸಮುದಾಯಗಳಿಗೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಅಲ್ಲದೆ, 59 ಜಾತಿಗಳು ಪ್ರವರ್ಗ ‘ಎ’ಗೆ ನಿಗದಿಪಡಿಸಿದ ಶೇ 1ರಲ್ಲಿಯೇ ಮೀಸಲಾತಿ ಪಡೆಯಬೇಕಾಗಿದೆ.</p>.<p>ಪ್ರವರ್ಗ ‘ಎ’ಯಲ್ಲಿ ಸೇರಿಸಿರುವ ಜಾತಿಗಳಾದ ಅರುಂತಾತಿಯಾರ್ (ಜನಸಂಖ್ಯೆ 9,058) ಮತ್ತು ಚಕ್ಕಿಲಿಯನ್ (ಜನಸಂಖ್ಯೆ 909), ದಕ್ಕಲ, ದೊಕ್ಕಲ್ವರ್ (ಜನಸಂಖ್ಯೆ 124), ದಕ್ಕಲಿಗ (ಜನಸಂಖ್ಯೆ 1364), ಜಾಂಬುವುಲ್ (ಜನಸಂಖ್ಯೆ 556), ಸಿಂಧೊಳ್ಳು, ಚಿಂದೊಳ್ಳು (ಜನಸಂಖ್ಯೆ 5,337) ಈ ಸಮುದಾಯಗಳನ್ನು ಪ್ರವರ್ಗ ‘ಬಿ’ಯಲ್ಲಿ ಸೇರಿಸಬೇಕಾಗಿದೆ.</p>.<p>ಪ್ರವರ್ಗ ‘ಎ’ಯಲ್ಲಿರುವ ಚೆನ್ನದಾಸರ, ಹೊಲೆಯ ದಾಸರ (ಜನಸಂಖ್ಯೆ, 79,625), ಹೊಲರ್, ವಲ್ಹರ್ (ಜನಸಂಖ್ಯೆ 11,248) ಈ ಸಮುದಾಯಗಳನ್ನು ಪ್ರವರ್ಗ ‘ಸಿ’ಗೆ ಸೇರಿಸಬೇಕಾಗಿದೆ. ಪ್ರವರ್ಗ ‘ಸಿ’ಗೆ ಸೇರಬೇಕಾಗಿರುವ ಮೊಗೇರ್ (ಜನಸಂಖ್ಯೆ 87,117), ಪರೈಯನ್, ಪರಾಯ (ಜನಸಂಖ್ಯೆ 1,61,164) ಈ ಎರಡೂ ಸಮುದಾಯಗಳನ್ನು ಪ್ರವರ್ಗ ‘ಬಿ’ಯಲ್ಲಿ ಸೇರಿಸಲಾಗಿದೆ. ಇವು ಪ್ರವರ್ಗ ‘ಸಿ’ ಜಾತಿಗೆ ಸಮಾನಂತರವಾಗಿವೆ. ಈ ರೀತಿಯ ವಿವಿಧ ಜಾತಿಗಳನ್ನು ಬೇರೆ ಬೇರೆ ಪ್ರವರ್ಗಗಳಲ್ಲಿ ವಿಂಗಡಿಸಿರುವುದು ಕಂಡುಬರುತ್ತಿದೆ.</p>.<p>2011ರ ಜನಗಣತಿಯ ಪ್ರಕಾರ ಬೇಡ ಸಂಗಮ, ಬುಡಗ ಜಂಗಮ ಸಮುದಾಯದವರ ಜನಸಂಖ್ಯೆಯು 1,17,164. ಆದರೆ, ಸಮೀಕ್ಷೆಯಲ್ಲಿ ಈ ಸಮುದಾಯದ ಒಟ್ಟು ಜನಸಂಖ್ಯೆ 3,22,049. ಈ ಹೆಚ್ಚಳವು ಕೃತಕವಾಗಿದೆ ಎಂದು ತಿಳಿದು, ಒಟ್ಟು 1,44,387 ಜನರನ್ನು ಮಾತ್ರ ಪ್ರವರ್ಗ ‘ಎ’ಯಲ್ಲಿ ಸೇರಿಸಿ, ಉಳಿದ 1,77,662 ಜನಸಂಖ್ಯೆಯನ್ನು ಕೈಬಿಡಲಾಗಿದೆ. ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಟಿಪ್ಪಣಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ಸಲ್ಲಿಸಿರುವ ವರದಿಯಲ್ಲಿರುವ ಜಾತಿವಾರು ವರ್ಗೀಕರಣವನ್ನು ಪರಿಷ್ಕರಿಸಿ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದು ಸೂಕ್ತ’ ಎಂದು ಸಮಾಜ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದೆ.</p>.<p>ಆಯೋಗ ಸಲ್ಲಿಸಿರುವ ವರದಿಯ ಕುರಿತು ಚರ್ಚಿಸಲು ಮಂಗಳವಾರ (ಆಗಸ್ಟ್ 19) ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಗೆ ಇಲಾಖೆ ಸಲ್ಲಿಸಿರುವ ‘ರಹಸ್ಯ ಟಿಪ್ಪಣಿ’ಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಟಿಪ್ಪಣಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.</p>.<p>‘ವರ್ಗೀಕರಣದ ಬಗ್ಗೆ ವಿಸ್ತಾರವಾಗಿ ಚರ್ಚಿಸುವ ಅಗತ್ಯವಿದೆ’ ಎಂದು ಇಲಾಖೆ ತನ್ನ ಟಿಪ್ಪಣಿಯಲ್ಲಿ ಪ್ರತಿಪಾದಿಸಿರುವುದರಿಂದಾಗಿ, ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಳ್ಳಬಹುದಾದ ನಿರ್ಣಯದ ಬಗ್ಗೆ ಎಲ್ಲರ ಚಿತ್ತ ನಿಟ್ಟಿದೆ. ಆಯೋಗ ಈಗಾಗಲೇ ಹಂಚಿಕೆ ಮಾಡಿರುವ ‘ಮೀಸಲು’ ಪ್ರಮಾಣ ಬದಲಾಗುವ ಸಾಧ್ಯತೆಯಿದೆ ಎಂದೂ ಮೂಲಗಳು ಹೇಳಿವೆ.</p>.<p><strong>ಟಿಪ್ಪಣಿಯಲ್ಲಿ ಏನಿದೆ?</strong></p>.<p>2011ರ ಜನಗಣತಿಯಂತೆ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಪರಿಶಿಷ್ಟ ಜಾತಿ ಎಂದು ನಮೂದಿಸಿರುವವರ ಒಟ್ಟು ಜನಸಂಖ್ಯೆ 44.67 ಲಕ್ಷ (ಶೇ 43.63). ಪ್ರಸ್ತುತ ಸಮೀಕ್ಷೆಯಲ್ಲಿ 4,75,954ರಷ್ಟು ಜನರು ಅವರ ಮೂಲ ಜಾತಿಯನ್ನು ತಿಳಿಸಿಲ್ಲ. ಈ ಜನಸಂಖ್ಯೆಯನ್ನು ಪ್ರವರ್ಗ ‘ಇ’ ಎಂದು ವಿಂಗಡಿಸಿ ಶೇಕಡಾ 1 ಮೀಸಲಾತಿಯನ್ನು ಆಯೋಗದ ವರದಿಯಲ್ಲಿ ಹಂಚಿಕೆ ಮಾಡಲು ಶಿಫಾರಸು ಮಾಡಲಾಗಿದೆ. ಮೂಲ ಜಾತಿಯನ್ನು ತಿಳಿಸದೇ ಇರುವ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜಾತಿಗಳನ್ನು ಒಂದು ಗುಂಪಾಗಿ ವಿಂಗಡಿಸಿ ಶೇ 1 ರಷ್ಟು ಮೀಸಲಾತಿ ನೀಡಿದರೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರವೇಶ ಪಡೆಯುವಾಗ ‘ಡುಪ್ಲಿಕೇಟ್’ ಆಗಬಹುದು. ಈ ಜನರು ಇತರ ನಾಲ್ಕು ಗುಂಪುಗಳಲ್ಲಿಯೂ (ಪ್ರವರ್ಗ ಎ, ಬಿ, ಸಿ ಮತ್ತು ಡಿ) ಮೀಸಲಾತಿ ಪಡೆಯುವ ಸಂಭವ ಇರುತ್ತದೆ.</p>.<p>ಆಯೋಗದ ವರದಿಯ ಅನ್ವಯ ಪ್ರವರ್ಗ ‘ಎ’ ಗುಂಪುಗಳಿಗೆ ಶೇ 1ರಷ್ಟು ಮೀಸಲಾತಿ ಹಂಚಿಕೆಯಾಗಿದೆ. ಈ ಶೇ 1ರಷ್ಟು ಮೀಸಲಾತಿಯನ್ನು 100 ರೋಸ್ಟರ್ ಬಿಂದುಗಳಲ್ಲಿ (ನೇಮಕಾತಿ ಮತ್ತು ಬಡ್ತಿ ನೀಡುವ ವೇಳೆ ಮೀಸಲಾತಿ ಬಿಂದುಗಳನ್ನು ಗುರುತಿಸುವ ಪಟ್ಟಿ) ಗುರುತಿಸಿ ಅನುಷ್ಠಾನ ಮಾಡಿದರೂ ಈ ಸಮುದಾಯಗಳಿಗೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಅಲ್ಲದೆ, 59 ಜಾತಿಗಳು ಪ್ರವರ್ಗ ‘ಎ’ಗೆ ನಿಗದಿಪಡಿಸಿದ ಶೇ 1ರಲ್ಲಿಯೇ ಮೀಸಲಾತಿ ಪಡೆಯಬೇಕಾಗಿದೆ.</p>.<p>ಪ್ರವರ್ಗ ‘ಎ’ಯಲ್ಲಿ ಸೇರಿಸಿರುವ ಜಾತಿಗಳಾದ ಅರುಂತಾತಿಯಾರ್ (ಜನಸಂಖ್ಯೆ 9,058) ಮತ್ತು ಚಕ್ಕಿಲಿಯನ್ (ಜನಸಂಖ್ಯೆ 909), ದಕ್ಕಲ, ದೊಕ್ಕಲ್ವರ್ (ಜನಸಂಖ್ಯೆ 124), ದಕ್ಕಲಿಗ (ಜನಸಂಖ್ಯೆ 1364), ಜಾಂಬುವುಲ್ (ಜನಸಂಖ್ಯೆ 556), ಸಿಂಧೊಳ್ಳು, ಚಿಂದೊಳ್ಳು (ಜನಸಂಖ್ಯೆ 5,337) ಈ ಸಮುದಾಯಗಳನ್ನು ಪ್ರವರ್ಗ ‘ಬಿ’ಯಲ್ಲಿ ಸೇರಿಸಬೇಕಾಗಿದೆ.</p>.<p>ಪ್ರವರ್ಗ ‘ಎ’ಯಲ್ಲಿರುವ ಚೆನ್ನದಾಸರ, ಹೊಲೆಯ ದಾಸರ (ಜನಸಂಖ್ಯೆ, 79,625), ಹೊಲರ್, ವಲ್ಹರ್ (ಜನಸಂಖ್ಯೆ 11,248) ಈ ಸಮುದಾಯಗಳನ್ನು ಪ್ರವರ್ಗ ‘ಸಿ’ಗೆ ಸೇರಿಸಬೇಕಾಗಿದೆ. ಪ್ರವರ್ಗ ‘ಸಿ’ಗೆ ಸೇರಬೇಕಾಗಿರುವ ಮೊಗೇರ್ (ಜನಸಂಖ್ಯೆ 87,117), ಪರೈಯನ್, ಪರಾಯ (ಜನಸಂಖ್ಯೆ 1,61,164) ಈ ಎರಡೂ ಸಮುದಾಯಗಳನ್ನು ಪ್ರವರ್ಗ ‘ಬಿ’ಯಲ್ಲಿ ಸೇರಿಸಲಾಗಿದೆ. ಇವು ಪ್ರವರ್ಗ ‘ಸಿ’ ಜಾತಿಗೆ ಸಮಾನಂತರವಾಗಿವೆ. ಈ ರೀತಿಯ ವಿವಿಧ ಜಾತಿಗಳನ್ನು ಬೇರೆ ಬೇರೆ ಪ್ರವರ್ಗಗಳಲ್ಲಿ ವಿಂಗಡಿಸಿರುವುದು ಕಂಡುಬರುತ್ತಿದೆ.</p>.<p>2011ರ ಜನಗಣತಿಯ ಪ್ರಕಾರ ಬೇಡ ಸಂಗಮ, ಬುಡಗ ಜಂಗಮ ಸಮುದಾಯದವರ ಜನಸಂಖ್ಯೆಯು 1,17,164. ಆದರೆ, ಸಮೀಕ್ಷೆಯಲ್ಲಿ ಈ ಸಮುದಾಯದ ಒಟ್ಟು ಜನಸಂಖ್ಯೆ 3,22,049. ಈ ಹೆಚ್ಚಳವು ಕೃತಕವಾಗಿದೆ ಎಂದು ತಿಳಿದು, ಒಟ್ಟು 1,44,387 ಜನರನ್ನು ಮಾತ್ರ ಪ್ರವರ್ಗ ‘ಎ’ಯಲ್ಲಿ ಸೇರಿಸಿ, ಉಳಿದ 1,77,662 ಜನಸಂಖ್ಯೆಯನ್ನು ಕೈಬಿಡಲಾಗಿದೆ. ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಟಿಪ್ಪಣಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>