‘ಕಾವೇರಿ ಕೂಗು’ ಅಭಿಯಾನ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುಷ್ಠಾನಕ್ಕೆ ಬರಲಿದೆ. ಕಾವೇರಿ ಜಲಾನಯನ ಪ್ರದೇಶದ ಸುಮಾರು 24 ಲಕ್ಷ ರೈತರಿಗೆ ತಮ್ಮ ಜಮೀನುಗಳಲ್ಲಿ ಶೇ 10ರಷ್ಟು ಜಾಗವನ್ನು ಅರಣ್ಯ ಕೃಷಿಗೆ ಮೀಸಲಿಡಲು ಕೋರಲಾಗುವುದು. ಇಷ್ಟು ಭೂಮಿಯಲ್ಲಿ ಮರ ಬೆಳೆಸಿದರೂ, ಅವರ ಆದಾಯ ಐದರಿಂದ ಹತ್ತು ಪಟ್ಟು ಹೆಚ್ಚಾಗಲಿದೆ’ ಎಂದು ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ಕೇಂದ್ರದ ನಿರ್ದೇಶಕ ನರಸಿಂಹ ರಾಜು ತಿಳಿಸಿದರು.