ಬೆಳಗಾವಿ: ‘ನಾನು ಯಾರಿಗೂ ಸಹಾಯ ಮಾಡಬಾರದು, ಸಹಾಯ ಪಡೆಯಬಾರದು, ಯಾರಿಗೂ ಸಾಲ ಕೊಡಬಾರದು, ಸಂಘಟನೆಯಲ್ಲೂ ತೊಡಗಬಾರದು ಎಂಬ ರೀತಿಯಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಇದೇ ಸಿಬಿಐ, ಇಡಿ ದಾಳಿಯ ಉದ್ದೇಶ’ ಎಂದು ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದ ವಿಚಾರವಾಗಿ ನಗರದಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ‘ನನ್ನ ಸಂಪರ್ಕ ಇಟ್ಟುಕೊಂಡಿರುವ ಎಲ್ಲರ ಸಂಸ್ಥೆ, ಮನೆಗಳ ಮೇಲೂ ದಾಳಿ ನಡೆದಿದೆ. ನನ್ನ ವಕೀಲರಿಂದ ಹಿಡಿದು ಟ್ರಾವೆಲ್ ಏಜೆನ್ಸಿಯವರೆಗೂ ಯಾರನ್ನೂ ಬಿಟ್ಟಿಲ್ಲ’ ಎಂದರು.
‘ಸಿಬಿಐಗೆ ಮುಂಚೆಯೇ ನಾನು ಎಲ್ಲ ದಾಖಲೆ ಕೊಟ್ಟಿದ್ದೆ, ಚುನಾವಣೆ ಮುಗಿದ ಬಳಿಕ ಕರೆಯಿರಿ ಎಂದೂ ಹೇಳಿದ್ದೆ. ಆದರೆ, ತನಿಖಾ ಸಂಸ್ಥೆಗಳಿಗೆ ನಾನೊಬ್ಬನೇ ಕಾಣಿಸುತ್ತಿದ್ದೇನೆ’ ಎಂದರು.