ಬೆಂಗಳೂರು:ಪ್ರವಾಹದಿಂದಗುಡ್ಡಕುಸಿದ ಸಂದರ್ಭದಲ್ಲಿ ಮನೆಕಳೆದುಕೊಂಡ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಆಸರೆಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಹತ್ತಿರದಮಾವಿನಕೆರೆ ಸಮೀಪಕುಟುಂಬವೊಂದು ಗುಹೆಯಲ್ಲಿ ವಾಸವಾಗಿದೆ. ಈ ಬಗ್ಗೆ ಸಿಎಂ ಗಮನಕ್ಕೆ ಬಂದ ತಕ್ಷಣವೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಕೂಡಲೆ ಅವರಿಗೆ ವಾಸಿಸಲು ವಸತಿವ್ಯವಸ್ಥೆ ಮಾಡಿ,ಒಂದು ಲಕ್ಷ ಹಣ ನೀಡುವಂತೆ ತಿಳಿಸಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೆರೆ ಗ್ರಾಮದ ಕಲ್ಲಕ್ಕಿಯಲ್ಲಿದ್ದ ಅನಂತ ಎಂಬುವವರ ಮನೆ ಮಳೆಯಿಂದಾಗಿ ಸಂಪೂರ್ಣ ಕುಸಿದು ಬಿದ್ದಿತ್ತು. ಸುತ್ತಮುತ್ತಲಿನ ಕನಿಷ್ಠ ನಾಲ್ಕು ಕಿ.ಮೀ. ಅಂತರದಲ್ಲಿ ಯಾವುದೇ ಮನೆಗಳಿಲ್ಲದ ಕಾರಣ ಕಂಗಾಲಾದ ಕುಟುಂಬ ಅಲ್ಲಿಯೇ ಸಮೀಪದಲ್ಲಿದ್ದ ಕಲ್ಲಿನ ಗುಹೆಯೊಂದರಲ್ಲಿ ಆಶ್ರಯ ಪಡೆದಿದೆ.