ಬುಧವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಈ ಅಪವಿತ್ರ ಮೈತ್ರಿಗೆ ಎಲ್ಲ ರಾಜ್ಯ ಘಟಕಗಳ ವಿರೋಧ ಇದೆ. ಮೈತ್ರಿಯನ್ನು ಮರು ಪರಿಶೀಲಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ಮನವರಿಕೆ ಮಾಡಲಾಗುವುದು. ಒಂದು ವೇಳೆ ನಿಲುವು ಬದಲಿಸದಿದ್ದರೆ ಹೊಸ ಅಧ್ಯಕ್ಷರನ್ನು ನೇಮಿಸಲಾಗುವುದು’ ಎಂದರು.