‘ನಾನು ವಲಸೆ ಪ್ರಾಣಿ ಅಲ್ಲ’
‘ಅಧಿಕಾರಕ್ಕಾಗಿ ವಲಸೆ ಬಂದ ಪ್ರಾಣಿ ನನಲ್ಲ. ಅದಕ್ಕಾಗಿ ಪಕ್ಷಾಂತರ ಮಾಡುವವನೂ ಅಲ್ಲ. ಕೆಲವರು ಕಾಂಗ್ರೆಸ್ ನಮ್ಮದೇ ಎನ್ನುತ್ತಿದ್ದಾರೆ. ಅದಕ್ಕೇ ನನ್ನ ಅಸಮಾಧಾನ’ ಎಂದು ಹರಿಪ್ರಸಾದ್ ಸ್ವಪಕ್ಷದ ನಾಯಕರನ್ನೇ ಹೆಸರು ಹೇಳದೆ ಟೀಕಿಸಿದರು.
‘ನನಗೆ ಕಾಂಗ್ರೆಸ್ ಮೇಲೂ ಅಸಮಾಧಾನ ಇಲ್ಲ. ವಿದ್ಯಾರ್ಥಿ ಆಗಿದ್ದಾಗಿನಿಂದ ಕಾಂಗ್ರೆಸ್ನಲ್ಲಿ ಇದ್ದೀನಿ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ. ಅವರ ಮೇಲೆ ಏಕೆ ಸಿಟ್ಟು ಮಾಡೋಣ’ ಎಂದರು. ‘ನಿಗಮ ಮಂಡಳಿ ನೇಮಕ ವಿಚಾರವನ್ನು ಸರ್ಕಾರದವರನ್ನೇ ಕೇಳಬೇಕು. ನಾನು ಸರ್ಕಾರದಲ್ಲಿ ಇಲ್ಲ ಹೊರಗಡೆ ಇದ್ದೀನಿ. ಯಾವ ಮಾನದಂಡ ಅನುಸರಿಸುತ್ತರೋ ಗೊತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.