ನಮ್ಮ ಸರ್ಕಾರ ಕಷ್ಟದ ಸಂದರ್ಭದಲ್ಲಿ ನಡೆಯಿತು. ಯಡಿಯೂರಪ್ಪ ಅವರು ಪ್ರವಾಹ ,ಕೋವಿಡ್ ಸಂದರ್ಭದಲ್ಲಿ ನಿರ್ವಹಿಸಿದ ಕೆಲಸ ನೋಡಿದರೆ ಅವರನ್ನು ಯಾವುದೇ ಮುಖ್ಯಮಂತ್ರಿ ಸರಿಗಟ್ಟಲು ಸಾಧ್ಯವಿಲ್ಲ. ಬಡವರು, ನೊಂದವರು, ಸಂತ್ರಸ್ತರಿಗೆ ಧಾರಾಳವಾಗಿ ಅನುದಾನ ನೀಡಿದರು. ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ತಲಾ ₹5 ಲಕ್ಷ, ₹3 ಲಕ್ಷ ಪ್ರಕಟಿಸಿದರು. ಕಿಸಾನ್ ಸಮ್ಮಾನ್ ಅಡಿ ರೈತರಿಗೆ ಹೆಚ್ಚುವರಿಯಾಗಿ ತಲಾ ₹4,000 ಘೋಷಿಸಿದರು. ಇಂತಹ ದಿಟ್ಟ ತೀರ್ಮಾನವನ್ನು ದೇಶದ ಯಾವುದೇ ಮುಖ್ಯಮಂತ್ರಿ ತೆಗೆದುಕೊಳ್ಳಲಿಲ್ಲ ಎಂದರು.