<p><strong>ಬೆಂಗಳೂರು</strong>: ಕರ್ನಾಟಕ ಸಹಕಾರ ಸಂಘಗಳ (ಕೆಸಿಎಸ್) ಕಾಯ್ದೆ–1959 ಮತ್ತು 1960ರ ನಿಯಮಗಳಲ್ಲಿನ ಹಲವು ನ್ಯೂನತೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ‘ಕಾಯ್ದೆಯನ್ನು ಕೂಲಂಕಶ ಪರಿಶೀಲನೆಗೆ ಒಳಪಡಿಸಿ ತುರ್ತಾಗಿ ಸಮಗ್ರ ತಿದ್ದುಪಡಿಗೆ ಒಳಪಡಿಸುವ ಅಗತ್ಯವಿದೆ’ ಎಂದು ಆದೇಶಿಸಿದೆ.</p>.<p>ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಶಂಕರ್ ಜಿ.ಭಟ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿ ಕಳೆದ ತಿಂಗಳು ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕಾಯ್ದೆ ಜಾರಿಯಾಗಿ ದಶಕಗಳೇ ಕಳೆದಿದ್ದು, ಹಲವು ತಿದ್ದುಪಡಿ ಕಂಡಿದೆ. ಆದರೆ ಅದರಲ್ಲಿ ಇನ್ನೂ ಸಾಕಷ್ಟು ಅಸ್ಪಷ್ಟತೆಗಳಿದ್ದು ಅವುಗಳನ್ನು ಸರಿಪಡಿಸಬೇಕಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.</p>.<p>‘ಕಾಯ್ದೆಯ ಅಡಿಯಲ್ಲಿ ಬರುವ ಸದಸ್ಯತ್ವದ ಹಕ್ಕುಗಳು, ಅನರ್ಹತೆ, ಮತದಾರರ ಪಟ್ಟಿ ಸಿದ್ಧಪಡಿಸುವುದು, ಕಾಲಕಾಲಕ್ಕೆ ಚುನಾವಣೆ ನಡೆಸುವುದು, ಆಡಳಿತಾಧಿಕಾರಿ ನೇಮಕಾತಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಸಂಘರ್ಷದ ಅಂಶಗಳಿವೆ. ತಾರ್ಕಿಕ ರೀತಿಯಲ್ಲಿ ಕೆಸಿಎಸ್ ಕಾನೂನಿಗೆ ಸಮಗ್ರ ತಿದ್ದುಪಡಿವ ತರುವ ಕೆಲಸ ಜರೂರಾಗಿ ಆಗಬೇಕಿದೆ’ ಎಂದು ನ್ಯಾಯಪೀಠ ಹೇಳಿದೆ.</p>.<p>‘ಸಮಕಾಲೀನ ಅಗತ್ಯಗಳನ್ನು ಪರಿಹರಿಸಲು ಕಂಪನಿ ಕಾಯ್ದೆಯನ್ನು ಸಮಗ್ರವಾಗಿ ಪರಿಷ್ಕರಿಸಿದಂತೆಯೇ, ಕಲಂ 43 ಬಿ ಅಡಿಯಲ್ಲಿ ಸಹಕಾರಿ ಸಂಸ್ಥೆಗಳ ಸ್ವಾಯತ್ತತೆಯನ್ನು ಸಾಂವಿಧಾನಿಕ ತತ್ವಗಳೊಂದಿಗೆ ದಕ್ಷತೆ, ಪಾರದರ್ಶಕತೆ ಮತ್ತು ಹೊಂದಾಣಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ತಿದ್ದುಪಡಿ ಮಾಡಬೇಕು. ಇಲ್ಲವಾದಲ್ಲಿ ಸುಧಾರಣೆ ಶೂನ್ಯವಾಗಿ ವ್ಯರ್ಥ ಮೊಕದ್ದಮೆಗಳ ದಾವೆ ಸಂಘರ್ಷ ನಡೆಯುತ್ತದೆ. ಸದಸ್ಯರ ಸಬಲೀಕರಣದ ನಿಜವಾದ ಉದ್ದೇಶ ವಿಫಲವಾಗುತ್ತದೆ’ ಎಂದು ಆದೇಶದಲ್ಲಿ ವಿವರಿಸಿದೆ.</p>.<p>‘1959ರ ಕೆಸಿಎಸ್ ಕಾಯ್ದೆ ಮತ್ತು 1960ರ ಕೆಸಿಎಸ್ ನಿಯಮಗಳನ್ನು ದಶಕಗಳಿಂದಲೂ ಒಂದೊಂದೇ ತಿದ್ದುಪಡಿಗಳಿಗೆ ಒಳಪಡಿಸಲಾಗಿದೆ. ದುರದೃಷ್ಟವಶಾತ್, ಅಂತಹ ತಿದ್ದುಪಡಿಗಳನ್ನು ಮಾಡುವಾಗ, ಅಸ್ತಿತ್ವದಲ್ಲಿರುವ ನಿಬಂಧನೆಗಳ ಮೇಲಿನ ಪರಸ್ಪರ ಕ್ರಿಯೆ ಮತ್ತು ಅದರಿಂದಾಗುವ ಅಡ್ಡ ಪರಿಣಾಮಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಪರಿಣಾಮ ಈ ಕಾನೂನು ಆಧುನಿಕ, ಸಾಮಾಜಿಕ, ಆರ್ಥಿಕ ಪರಿಸರಕ್ಕೆ ಹೊಂದಿಕೆಯಾಗದ ಸಂಘರ್ಷಯುಕ್ತ ನಿಬಂಧನೆಗಳ ತೇಪೆ ಕೆಲಸದಂತಾಗಿದೆ’ ಎಂದು ಹೇಳಿದೆ.</p>.<p>ಈ ಆದೇಶದ ಪ್ರತಿಯನ್ನು ಕರ್ನಾಟಕ ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಿಗೆ ಕಳುಹಿಸಲು ಮತ್ತು ಅವರ ಅಭಿಪ್ರಾಯ ಹಾಗೂ ಶಿಫಾರಸುಗಳನ್ನು ಪರಿಗಣಿಸಲು ವಿನಂತಿಸುವಂತೆ ಹೈಕೋರ್ಟ್ನ ನ್ಯಾಯಾಂಗ ರಿಜಿಸ್ಟ್ರಾರ್ ಅವರಿಗೆ ನ್ಯಾಯಪೀಠ ನಿರ್ದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ಸಹಕಾರ ಸಂಘಗಳ (ಕೆಸಿಎಸ್) ಕಾಯ್ದೆ–1959 ಮತ್ತು 1960ರ ನಿಯಮಗಳಲ್ಲಿನ ಹಲವು ನ್ಯೂನತೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ‘ಕಾಯ್ದೆಯನ್ನು ಕೂಲಂಕಶ ಪರಿಶೀಲನೆಗೆ ಒಳಪಡಿಸಿ ತುರ್ತಾಗಿ ಸಮಗ್ರ ತಿದ್ದುಪಡಿಗೆ ಒಳಪಡಿಸುವ ಅಗತ್ಯವಿದೆ’ ಎಂದು ಆದೇಶಿಸಿದೆ.</p>.<p>ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಶಂಕರ್ ಜಿ.ಭಟ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿ ಕಳೆದ ತಿಂಗಳು ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕಾಯ್ದೆ ಜಾರಿಯಾಗಿ ದಶಕಗಳೇ ಕಳೆದಿದ್ದು, ಹಲವು ತಿದ್ದುಪಡಿ ಕಂಡಿದೆ. ಆದರೆ ಅದರಲ್ಲಿ ಇನ್ನೂ ಸಾಕಷ್ಟು ಅಸ್ಪಷ್ಟತೆಗಳಿದ್ದು ಅವುಗಳನ್ನು ಸರಿಪಡಿಸಬೇಕಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.</p>.<p>‘ಕಾಯ್ದೆಯ ಅಡಿಯಲ್ಲಿ ಬರುವ ಸದಸ್ಯತ್ವದ ಹಕ್ಕುಗಳು, ಅನರ್ಹತೆ, ಮತದಾರರ ಪಟ್ಟಿ ಸಿದ್ಧಪಡಿಸುವುದು, ಕಾಲಕಾಲಕ್ಕೆ ಚುನಾವಣೆ ನಡೆಸುವುದು, ಆಡಳಿತಾಧಿಕಾರಿ ನೇಮಕಾತಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಸಂಘರ್ಷದ ಅಂಶಗಳಿವೆ. ತಾರ್ಕಿಕ ರೀತಿಯಲ್ಲಿ ಕೆಸಿಎಸ್ ಕಾನೂನಿಗೆ ಸಮಗ್ರ ತಿದ್ದುಪಡಿವ ತರುವ ಕೆಲಸ ಜರೂರಾಗಿ ಆಗಬೇಕಿದೆ’ ಎಂದು ನ್ಯಾಯಪೀಠ ಹೇಳಿದೆ.</p>.<p>‘ಸಮಕಾಲೀನ ಅಗತ್ಯಗಳನ್ನು ಪರಿಹರಿಸಲು ಕಂಪನಿ ಕಾಯ್ದೆಯನ್ನು ಸಮಗ್ರವಾಗಿ ಪರಿಷ್ಕರಿಸಿದಂತೆಯೇ, ಕಲಂ 43 ಬಿ ಅಡಿಯಲ್ಲಿ ಸಹಕಾರಿ ಸಂಸ್ಥೆಗಳ ಸ್ವಾಯತ್ತತೆಯನ್ನು ಸಾಂವಿಧಾನಿಕ ತತ್ವಗಳೊಂದಿಗೆ ದಕ್ಷತೆ, ಪಾರದರ್ಶಕತೆ ಮತ್ತು ಹೊಂದಾಣಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ತಿದ್ದುಪಡಿ ಮಾಡಬೇಕು. ಇಲ್ಲವಾದಲ್ಲಿ ಸುಧಾರಣೆ ಶೂನ್ಯವಾಗಿ ವ್ಯರ್ಥ ಮೊಕದ್ದಮೆಗಳ ದಾವೆ ಸಂಘರ್ಷ ನಡೆಯುತ್ತದೆ. ಸದಸ್ಯರ ಸಬಲೀಕರಣದ ನಿಜವಾದ ಉದ್ದೇಶ ವಿಫಲವಾಗುತ್ತದೆ’ ಎಂದು ಆದೇಶದಲ್ಲಿ ವಿವರಿಸಿದೆ.</p>.<p>‘1959ರ ಕೆಸಿಎಸ್ ಕಾಯ್ದೆ ಮತ್ತು 1960ರ ಕೆಸಿಎಸ್ ನಿಯಮಗಳನ್ನು ದಶಕಗಳಿಂದಲೂ ಒಂದೊಂದೇ ತಿದ್ದುಪಡಿಗಳಿಗೆ ಒಳಪಡಿಸಲಾಗಿದೆ. ದುರದೃಷ್ಟವಶಾತ್, ಅಂತಹ ತಿದ್ದುಪಡಿಗಳನ್ನು ಮಾಡುವಾಗ, ಅಸ್ತಿತ್ವದಲ್ಲಿರುವ ನಿಬಂಧನೆಗಳ ಮೇಲಿನ ಪರಸ್ಪರ ಕ್ರಿಯೆ ಮತ್ತು ಅದರಿಂದಾಗುವ ಅಡ್ಡ ಪರಿಣಾಮಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಪರಿಣಾಮ ಈ ಕಾನೂನು ಆಧುನಿಕ, ಸಾಮಾಜಿಕ, ಆರ್ಥಿಕ ಪರಿಸರಕ್ಕೆ ಹೊಂದಿಕೆಯಾಗದ ಸಂಘರ್ಷಯುಕ್ತ ನಿಬಂಧನೆಗಳ ತೇಪೆ ಕೆಲಸದಂತಾಗಿದೆ’ ಎಂದು ಹೇಳಿದೆ.</p>.<p>ಈ ಆದೇಶದ ಪ್ರತಿಯನ್ನು ಕರ್ನಾಟಕ ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಿಗೆ ಕಳುಹಿಸಲು ಮತ್ತು ಅವರ ಅಭಿಪ್ರಾಯ ಹಾಗೂ ಶಿಫಾರಸುಗಳನ್ನು ಪರಿಗಣಿಸಲು ವಿನಂತಿಸುವಂತೆ ಹೈಕೋರ್ಟ್ನ ನ್ಯಾಯಾಂಗ ರಿಜಿಸ್ಟ್ರಾರ್ ಅವರಿಗೆ ನ್ಯಾಯಪೀಠ ನಿರ್ದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>