‘ಸ್ಥಳೀಯವಾಗಿ ಸಿಗುವುದಿಲ್ಲ. ಬೇರೆ ಊರುಗಳಿಂದಲೇ ವಾಹನ ವ್ಯವಸ್ಥೆ ಮಾಡಿ ಕರೆಸಬೇಕು. ಬಂದರೂ ಹೆಚ್ಚಿನ ಕೂಲಿ ಕೇಳುತ್ತಾರೆ. ಹಾಗಾಗಿ, ಕುಟುಂಬದವರೇ ಸಿಕ್ಕಷ್ಟು ಸಿಗಲಿ ಎಂದು ಬಿಡಿಸುತ್ತಿದ್ದೇವೆ’ ಎಂದು ಹೇಳಿದರು.‘ಏ. 14ಕ್ಕೆ ಲಾಕ್ಡೌನ್ ಮುಗಿದಿದ್ದರೆ, ಅಷ್ಟೇನೂ ತೊಂದರೆಯಾಗುತ್ತಿರಲಿಲ್ಲ. ಆದರೆ, ತಿಂಗಳಾಂತ್ಯದವರೆಗೆ ವಿಸ್ತರಿಸಿರುವುದರಿಂದ ಬಹುತೇಕ ಬೆಳೆ ನೆಲದ ಪಾಲಾಗಲಿದೆ‘ ಎಂದು ಆತಂಕ ವ್ಯಕ್ತಪಡಿಸಿದರು.