‘ಗ್ರಾಮ ಸಭೆಯ ಹಕ್ಕಾಗಿದ್ದ ಫಲಾನುಭವಿಗಳ ಆಯ್ಕೆ ಮತ್ತು ಆ ಪಟ್ಟಿಯನ್ನು ಅಂತಿಮಗೊಳಿಸುವ ಅಧಿಕಾರವನ್ನು ಅಧಿಕಾರಿಗಳು, ಶಾಸಕರ ಹಿಡಿತದಲ್ಲಿರುವ ಜಾಗೃತ ಸಮಿತಿಗೆ ನೀಡಲು ಹೊರಟಿರುವ ಸರ್ಕಾರದ ನಿರ್ಧಾರ ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕ. ಸರ್ಕಾರ ಈ ನಿರ್ಧಾರಗಳನ್ನು ತಕ್ಷಣವೇ ಹಿಂಪಡೆದು, ಕಾನೂನಾತ್ಮಕವಾಗಿರುವ ಗ್ರಾಮ ಪಂಚಾಯಿತಿಗಳ ಅಧಿಕಾರಗಳನ್ನು ಅವುಗಳಿಗೆ ಹಸ್ತಾಂತರಿಸಬೇಕು. ಒಂದೊಮ್ಮೆ ಸರ್ಕಾರ ತನ್ನ ಈ ತಪ್ಪು ನಿರ್ಧಾರವನ್ನು ಬದಲಾಯಿಸದೇ ಕಾನೂನು ತಿದ್ದುಪಡಿಗೆ ಮುಂದಾದರೆ, ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.