ಬೆಂಗಳೂರು: ‘ರಾಜ್ಯ ಸರ್ಕಾರವು 2022–23ನೇ ಸಾಲಿನಲ್ಲಿ ನಡೆಸಲಿರುವ ಎಲ್ಲ ನೇಮಕಾತಿಗಳಲ್ಲೂ ವಯೋಮಿತಿ ಸಡಿಲಗೊಳಿಸಬೇಕು’ ಎಂದು ಉದ್ಯೋಗಾಕಾಂಕ್ಷಿಗಳು ಒತ್ತಾಯಿಸಿದ್ದಾರೆ.
‘ಕೋವಿಡ್ನಿಂದಾಗಿ ಹಲವು ಇಲಾಖೆಗಳಲ್ಲಿ ಹೊಸ ನೇಮಕಾತಿ ನಡೆದಿಲ್ಲ. 2011ರ ಕೆಎಎಸ್ ಹಾಗೂ ಕೆ.ಇ.ಬಿ.ನೇಮಕಾತಿಗಳನ್ನು ರದ್ದು ಮಾಡಲಾಗಿದೆ. ಕೆಲವು ಖಾಸಗಿ ಕಂಪನಿಗಳು ಕೋವಿಡ್ ನೆಪ ಮುಂದಿಟ್ಟು ಹಲವರನ್ನು ಕೆಲಸದಿಂದ ವಜಾಗೊಳಿಸಿವೆ.
ಹೀಗಾಗಿ ನಿರುದ್ಯೋಗಿಗಳ ಸಂಖ್ಯೆ ಏರಿದೆ. ವಯೋಮಿತಿ ಸಡಿಲಗೊಳಿಸಿದರೆ ‘ಡಿ’ ಗ್ರೂಪ್ ಹುದ್ದೆಗಳಿಗಾದರೂ ಪರೀಕ್ಷೆ ಬರೆಯಬಹುದು’ ಎಂದು ಮನವಿ ಮಾಡಿದ್ದಾರೆ.