‘ಕೋವಿಡ್ ತಗುಲಿ ಅಪ್ಪ ಸಾವಿಗೀಡಾದರು. ಸಹೋದರ ನಿರಂಜನ್ನನ್ನು ಸದ್ಯಕ್ಕೆ ಗುಣಪುರದಲ್ಲಿ ನಮ್ಮ ಜೊತೆ ಇಟ್ಟುಕೊಂಡಿದ್ದೇನೆ. ಶಾಲೆ ಆರಂಭವಾದರೆ ಅವನನ್ನು ಸೀಗೋಡಿಗೆ ಕಳಿಸುತ್ತೇನೆ. ನನಗೆ ಇಬ್ಬರು ಮಕ್ಕಳು ಇದ್ದಾರೆ. ತಮ್ಮನ ಜವಾಬ್ದಾರಿಯೂ ಹೆಗಲಿಗಿದೆ. ನಮ್ಮದು ಬಡ ಕುಟುಂಬ. ಸಹೋದರನಿಗೆ ಒಳ್ಳೆಯ ಭವಿಷ್ಯ ರೂಪಿಸಲು ದಾನಿಗಳು ಆಸರೆಯಾದರೆ ಅನುಕೂಲವಾಗುತ್ತದೆ’ ಎಂದು ಮೇಘನಾ
ವಿನಂತಿಸಿಕೊಂಡರು.
"ಚೆನ್ನಾಗಿ ವಿದ್ಯಾಭ್ಯಾಸ ಮಾಡಿ, ಅಪ್ಪನ ಕನಸನ್ನು ನನಸಾಗಿಸುತ್ತೇನೆ. ಏರೋನಾಟಿಕಲ್ ಎಂಜಿನಿಯರ್ ಆಗಬೇಕು ಎಂಬ ಗುರಿ ಇದೆ.
-ನಿರಂಜನ್, ಈಶ್ವರಹಳ್ಳಿ ಬಾಲಕ