ಒಂದೇ ಕುಲ, ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂಬ ತತ್ವವನ್ನು ನಾರಾಯಣ ಗುರುಗಳು ಸಾರಿದರು. ಆ ಬೆಳಕಿನಲ್ಲಿ ದೇಶ ಸಾಗಬೇಕು.ಬಸವಣ್ಣ, ಮಹಾತ್ಮ ಫುಲೆ, ಯೋಗಿ ವೇಮನ ಸೇರಿದಂತೆ ಸಹಬಾಳ್ವೆ, ಶೋಷಣೆ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದವರು ನೀಡಿದ ಸಂದೇಶಗಳ ತಳಹದಿಯಲ್ಲಿ ನವ ಸಮಾಜ ನಿರ್ಮಸುವ ಪ್ರಯತ್ನ ಧಾರ್ಮಿಕ ಮುಖಂಡರಿಂದ ಆಗಬೇಕು ಎಂದರು.