ನಿಯಮ–72ರ ಅಡಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ’ಬಲಿಷ್ಠ ಸಮುದಾಯಗಳಿಗೆ ಸೇರಿದ ಕೆಂಪೇಗೌಡ, ಬಸವೇಶ್ವರ, ವಾಲ್ಮೀಕಿ ಜಯಂತಿಗಳನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಸಣ್ಣ, ಸಣ್ಣ ಸಮುದಾಯಗಳ ಜಯಂತಿ ಆಚರಣೆಗೆ ಸರ್ಕಾರ ತಾತ್ಸಾರ ತೋರುತ್ತಿದೆ. ಸಚಿವರು ಸಹ ಜಯಂತಿಗಳಲ್ಲಿ ಭಾಗವಹಿಸುವುದಿಲ್ಲ‘ ಎಂದು ಹೇಳಿದರು.