ಡಿ.ಕೆ.ಶಿವಕುಮಾರ್ ಬಂಧನ ವಿಚಾರದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಮಾಧ್ಯಮದವರಿಗೆ ಕೈಮುಗಿದ ಕಾರಜೋಳ, 'ನಾನು ಹೇಳೋದೆ ಬೇರೆ ನೀವೂ ಬಿಂಬಿಸೋದು ಬೇರೆ ಆಗುತ್ತೆ... ಅದನ್ನು ಕೇಳಿಬೇಡಿ.. ನಾನು ಸಹಜವಾಗಿ ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಕೆಲವು ಶಬ್ದ ಬಳಸುತ್ತೇನೆ. ಅದನ್ನು ನೀವು (ಮಾಧ್ಯಮದವರು) ಕನಕಪುರ ಬಂಡೆಗೆ ಕಾರಜೋಳ ಡಿಚ್ಚಿ ಹೊಡೆದ್ರು ಅಂದ್ರೆ ನನ್ನ ಗತಿಯೇನು..!?' ಎಂದು ಪ್ರಶ್ನಿಸಿದರು.