<p><strong>ಮೈಸೂರು:</strong> ಮೈಸೂರು ಭಾಗದ ಮಂಡ್ಯ ಮತ್ತು ಕೊಡಗುವಿನ ಜಿಲ್ಲಾ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆಯಾಗಿದೆ. ಈ ಕೊರತೆಯನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎ.ಬಿ.ಆರ್.ಕೆ) ಯೋಜನೆಯಡಿ ಸ್ಥಳೀಯವಾಗಿ ಔಷಧ ಖರೀದಿಸಿ ಸದ್ಯಕ್ಕೆ ಸರಿದೂಗಿಸಲಾಗುತ್ತಿದೆ. </p>.<p>ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ತಲೆದೋರಿದರೆ ಸಮಸ್ಯೆ ಉಲ್ಬಣಿಸಲಿದೆ. ನೇರವಾಗಿ ಅದರ ಬಿಸಿ ರೋಗಿಗಳಿಗೂ ತಟ್ಟಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಯಾದಗಿರಿ: ‘ಸಾಲ ಮಾಡಿ ಖರೀದಿ’</strong></p>.<p>ಯಾದಗಿರಿ: ‘ಏಪ್ರಿಲ್ ತಿಂಗಳಿಂದ ಅಭಾವವಿದೆ. ತಾಲ್ಲೂಕು ಆಸ್ಪತ್ರೆಯವರು ₹10 ಲಕ್ಷದಿಂದ ₹15 ಲಕ್ಷದವರೆಗೆ, ಸಮುದಾಯ ಆರೋಗ್ಯ ಕೇಂದ್ರದವರು ₹3 ಲಕ್ಷದಿಂದ ₹4 ಲಕ್ಷದವರೆಗೆ ಸಾಲ ಮಾಡಿ ಔಷಧಗಳು ಖರೀದಿಸಿದ್ದಾರೆ. ಇದುವರೆಗೂ ಅನುದಾನ ಬಂದಿಲ್ಲ..’ ಎಂದು ಹೆಸರು ಹೇಳಲಿಚ್ಛಿಸದ ಯಾದಗಿರಿ ಜಿಲ್ಲೆಯ ಆರೋಗ್ಯ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಯೊಬ್ಬರ ಅಳಲು ತೋಡಿಕೊಂಡರು </p>.<p>‘300 ಬಗೆಯ ಔಷಧ ಪೂರೈಕೆ ಆಗಬೇಕಿತ್ತು. 30 ಔಷಧಗಳಷ್ಟೇ ಪೂರೈಕೆ ಆಗುತ್ತದೆ. ಕೇವಲ ಶೇ10ರಷ್ಟು ಔಷಧಗಳ ಮೇಲೆ ಆಸ್ಪತ್ರೆ ನಡೆಸಲು ಆಗುತ್ತಿಲ್ಲ. ಸಂಬಳವೇ ಒಂದೊಂದು ತಿಂಗಳು ತಡವಾಗಿ ಬರುತ್ತಿದೆ. ಸಾಲ ಮಾಡಿ ಹೇಗೆ ಖರೀದಿಸೋದು’ ಎಂದು ಪ್ರಶ್ನಿಸಿದರು. </p>.<p>‘ಎಬಿಆರ್ಕೆಯಿಂದಲೂ ಸರಿಯಾಗಿ ಅನುದಾನ ಬರುತ್ತಿಲ್ಲ. ₹10 ಲಕ್ಷ ಅನುದಾನಕ್ಕೆ ಬೇಡಿಕೆ ಇರಿಸಿದರೆ ಒಂದೆರಡು ಲಕ್ಷ ರೂಪಾಯಿ ಮಾತ್ರ ಕೊಡುತ್ತಿದ್ದಾರೆ’ ಎಂದು ಹೇಳಿದರು.</p>.<p>ಕಲಬುರಗಿ ಜಿಲ್ಲೆಯಲ್ಲಿ ಐಫ್ಲ್ಯುಡ್ಸ್ಗಳು, ಆ್ಯಂಟಿ ಬಯಾಟಿಕ್ಸ್ ಚುಚ್ಚುಮದ್ದು, ಬೀದರ್ನಲ್ಲಿ ‘ಸೆಪ್ಟ್ರ್ಯಾಕ್ಜನ್’ ಆ್ಯಂಟಿಬಯೋಟಿಕ್ ಇಂಜೆಕ್ಷನ್ ಕೊರತೆ ಇದೆ. ’ರಾಯಚೂರಿನಲ್ಲಿ ಸ್ಥಳೀಯ ಅನುದಾನದಲ್ಲಿ ಔಷಧ ಖರೀದಿಗೆ ಕ್ರಮವಹಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ರೋಗಿಗಳಿಗೆ ಚೀಟಿ ಬರೆದು ಕೊಡ್ತಿದ್ದೇವೆ..</strong> </p>.<p>ದಾವಣಗೆರೆ/ಚಿತ್ರದುರ್ಗ/ಶಿವಮೊಗ್ಗ: ಉಚಿತವಾಗಿ ನೀಡುತ್ತಿದ್ದ ಔಷಧಗಳ ಕೊರತೆಯು ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಎದುರಾಗಿದೆ. ಖಾಸಗಿ ಔಷಧದ ಅಂಗಡಿಯಲ್ಲಿ ಖರೀದಿಸುವಂತೆ ವೈದ್ಯರು, ಶುಶ್ರೂಷಕರು ಚೀಟಿ ನೀಡುತ್ತಿದ್ದಾರೆ.</p>.<p>ನೋವು ನಿವಾರಕಗಳು, ರೋಗ ನಿರೋಧಕ ಮಾತ್ರೆಗಳು, ಸಿರಪ್ಗಳ ಕೊರತೆ ತೀವ್ರವಾಗಿದೆ. ‘ಮಂಡಿ ನೋವು, ಬೆನ್ನು ನೋವಿಗೆ ಹೆಚ್ಚಿನ ಜನರಿಗೆ ನೀಡುತ್ತಿದ್ದ ಔಷಧಗಳ ಪೂರೈಕೆ ಸ್ಥಗಿತಗೊಂಡಿದೆ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ತಿಳಿಸಿದರು.</p>.<p>‘ಚಿತ್ರದುರ್ಗ ಜಿಲ್ಲೆಯಲ್ಲಿ ಹುಚ್ಚು ನಾಯಿ ಕಡಿತ, ಹಾವು ಕಡಿತಕ್ಕೆ ಬಳಸುವ ಔಷಧಿಗಳೂ ಕೊರತೆ ಇವೆ’ ಎಂದು ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ, ಭದ್ರಾವತಿ) ತಾಲ್ಲೂಕು ಆಸ್ಪತ್ರೆಗಳಲ್ಲಿ 2025ರ ಏಪ್ರಿಲ್ನಿಂದಲೇ ಕೆಲವು ಮುಖ್ಯ ಔಷಧ ಪೂರೈಕೆ ಸ್ಥಗಿತಗೊಂಡಿದೆ‘ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ.</p>.<p><strong>ಕರಾವಳಿಯಲ್ಲೂ ಖಾಸಗಿಯಾಗಿ ಖರೀದಿ</strong> </p>.<p>ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಗತ್ಯ ಹಾಗೂ ತುರ್ತಾಗಿ ಬೇಕಾಗುವ ಔಷಧಗಳ ಕೊರತೆ ನೀಗಿಸಲು ಒಂದೊಂದಾಗಿ ಖರೀದಿಸಲಾಗಿದ್ದು, ಕೊರತೆ ತಕ್ಕ ಮಟ್ಟಿಗೆ ನೀಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.</p>.<p>‘ಕೊರತೆ ಇದ್ದ 170 ಔಷಧಗಳ ಖರೀದಿಗೆ ಆದೇಶವಾಗಿದೆ. 82 ಔಷಧಗಳ ಪೂರೈಕೆ ಆದೇಶ ಆಗಿದೆ. ಈ ಔಷಧಗಳು ಒಂದೊಂದಾಗಿ ಜಿಲ್ಲಾ ಔಷಧ ಉಗ್ರಾಣಕ್ಕೆ ತಲುಪಲಿವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p>‘ಆದರೆ,ಒಳರೋಗಿಗಳು ಯಾವುದೇ ಔಷಧವನ್ನು ಹೊರಗಿನಿಂದ ಖರೀದಿಸುವ ಪ್ರಮೇಯ ಇಲ್ಲ. ವಿರಳ ಔಷಧಗಳನ್ನು ಮಾತ್ರ ಹೊರಗಿನಿಂದ ತರಿಸಿಕೊಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. </p>.<p>‘ಉಡುಪಿ ಜಿಲ್ಲೆಯಲ್ಲಿ ಯಾವುದೇ ಔಷಧಗಳ ಕೊರತೆ ಇಲ್ಲ. ಜಿಲ್ಲೆಯಲ್ಲಿ ಹೆರಿಗೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಜನರು ಕಡಿಮೆ. ಈ ಕಾರಣಕ್ಕೆ ಹೆಚ್ಚಿನ ಔಷಧಗಳ ಕೊರತೆ ಆಗಿಲ್ಲ’ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮೈಸೂರು ಭಾಗದ ಮಂಡ್ಯ ಮತ್ತು ಕೊಡಗುವಿನ ಜಿಲ್ಲಾ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆಯಾಗಿದೆ. ಈ ಕೊರತೆಯನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎ.ಬಿ.ಆರ್.ಕೆ) ಯೋಜನೆಯಡಿ ಸ್ಥಳೀಯವಾಗಿ ಔಷಧ ಖರೀದಿಸಿ ಸದ್ಯಕ್ಕೆ ಸರಿದೂಗಿಸಲಾಗುತ್ತಿದೆ. </p>.<p>ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ತಲೆದೋರಿದರೆ ಸಮಸ್ಯೆ ಉಲ್ಬಣಿಸಲಿದೆ. ನೇರವಾಗಿ ಅದರ ಬಿಸಿ ರೋಗಿಗಳಿಗೂ ತಟ್ಟಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಯಾದಗಿರಿ: ‘ಸಾಲ ಮಾಡಿ ಖರೀದಿ’</strong></p>.<p>ಯಾದಗಿರಿ: ‘ಏಪ್ರಿಲ್ ತಿಂಗಳಿಂದ ಅಭಾವವಿದೆ. ತಾಲ್ಲೂಕು ಆಸ್ಪತ್ರೆಯವರು ₹10 ಲಕ್ಷದಿಂದ ₹15 ಲಕ್ಷದವರೆಗೆ, ಸಮುದಾಯ ಆರೋಗ್ಯ ಕೇಂದ್ರದವರು ₹3 ಲಕ್ಷದಿಂದ ₹4 ಲಕ್ಷದವರೆಗೆ ಸಾಲ ಮಾಡಿ ಔಷಧಗಳು ಖರೀದಿಸಿದ್ದಾರೆ. ಇದುವರೆಗೂ ಅನುದಾನ ಬಂದಿಲ್ಲ..’ ಎಂದು ಹೆಸರು ಹೇಳಲಿಚ್ಛಿಸದ ಯಾದಗಿರಿ ಜಿಲ್ಲೆಯ ಆರೋಗ್ಯ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಯೊಬ್ಬರ ಅಳಲು ತೋಡಿಕೊಂಡರು </p>.<p>‘300 ಬಗೆಯ ಔಷಧ ಪೂರೈಕೆ ಆಗಬೇಕಿತ್ತು. 30 ಔಷಧಗಳಷ್ಟೇ ಪೂರೈಕೆ ಆಗುತ್ತದೆ. ಕೇವಲ ಶೇ10ರಷ್ಟು ಔಷಧಗಳ ಮೇಲೆ ಆಸ್ಪತ್ರೆ ನಡೆಸಲು ಆಗುತ್ತಿಲ್ಲ. ಸಂಬಳವೇ ಒಂದೊಂದು ತಿಂಗಳು ತಡವಾಗಿ ಬರುತ್ತಿದೆ. ಸಾಲ ಮಾಡಿ ಹೇಗೆ ಖರೀದಿಸೋದು’ ಎಂದು ಪ್ರಶ್ನಿಸಿದರು. </p>.<p>‘ಎಬಿಆರ್ಕೆಯಿಂದಲೂ ಸರಿಯಾಗಿ ಅನುದಾನ ಬರುತ್ತಿಲ್ಲ. ₹10 ಲಕ್ಷ ಅನುದಾನಕ್ಕೆ ಬೇಡಿಕೆ ಇರಿಸಿದರೆ ಒಂದೆರಡು ಲಕ್ಷ ರೂಪಾಯಿ ಮಾತ್ರ ಕೊಡುತ್ತಿದ್ದಾರೆ’ ಎಂದು ಹೇಳಿದರು.</p>.<p>ಕಲಬುರಗಿ ಜಿಲ್ಲೆಯಲ್ಲಿ ಐಫ್ಲ್ಯುಡ್ಸ್ಗಳು, ಆ್ಯಂಟಿ ಬಯಾಟಿಕ್ಸ್ ಚುಚ್ಚುಮದ್ದು, ಬೀದರ್ನಲ್ಲಿ ‘ಸೆಪ್ಟ್ರ್ಯಾಕ್ಜನ್’ ಆ್ಯಂಟಿಬಯೋಟಿಕ್ ಇಂಜೆಕ್ಷನ್ ಕೊರತೆ ಇದೆ. ’ರಾಯಚೂರಿನಲ್ಲಿ ಸ್ಥಳೀಯ ಅನುದಾನದಲ್ಲಿ ಔಷಧ ಖರೀದಿಗೆ ಕ್ರಮವಹಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ರೋಗಿಗಳಿಗೆ ಚೀಟಿ ಬರೆದು ಕೊಡ್ತಿದ್ದೇವೆ..</strong> </p>.<p>ದಾವಣಗೆರೆ/ಚಿತ್ರದುರ್ಗ/ಶಿವಮೊಗ್ಗ: ಉಚಿತವಾಗಿ ನೀಡುತ್ತಿದ್ದ ಔಷಧಗಳ ಕೊರತೆಯು ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಎದುರಾಗಿದೆ. ಖಾಸಗಿ ಔಷಧದ ಅಂಗಡಿಯಲ್ಲಿ ಖರೀದಿಸುವಂತೆ ವೈದ್ಯರು, ಶುಶ್ರೂಷಕರು ಚೀಟಿ ನೀಡುತ್ತಿದ್ದಾರೆ.</p>.<p>ನೋವು ನಿವಾರಕಗಳು, ರೋಗ ನಿರೋಧಕ ಮಾತ್ರೆಗಳು, ಸಿರಪ್ಗಳ ಕೊರತೆ ತೀವ್ರವಾಗಿದೆ. ‘ಮಂಡಿ ನೋವು, ಬೆನ್ನು ನೋವಿಗೆ ಹೆಚ್ಚಿನ ಜನರಿಗೆ ನೀಡುತ್ತಿದ್ದ ಔಷಧಗಳ ಪೂರೈಕೆ ಸ್ಥಗಿತಗೊಂಡಿದೆ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ತಿಳಿಸಿದರು.</p>.<p>‘ಚಿತ್ರದುರ್ಗ ಜಿಲ್ಲೆಯಲ್ಲಿ ಹುಚ್ಚು ನಾಯಿ ಕಡಿತ, ಹಾವು ಕಡಿತಕ್ಕೆ ಬಳಸುವ ಔಷಧಿಗಳೂ ಕೊರತೆ ಇವೆ’ ಎಂದು ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ, ಭದ್ರಾವತಿ) ತಾಲ್ಲೂಕು ಆಸ್ಪತ್ರೆಗಳಲ್ಲಿ 2025ರ ಏಪ್ರಿಲ್ನಿಂದಲೇ ಕೆಲವು ಮುಖ್ಯ ಔಷಧ ಪೂರೈಕೆ ಸ್ಥಗಿತಗೊಂಡಿದೆ‘ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ.</p>.<p><strong>ಕರಾವಳಿಯಲ್ಲೂ ಖಾಸಗಿಯಾಗಿ ಖರೀದಿ</strong> </p>.<p>ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಗತ್ಯ ಹಾಗೂ ತುರ್ತಾಗಿ ಬೇಕಾಗುವ ಔಷಧಗಳ ಕೊರತೆ ನೀಗಿಸಲು ಒಂದೊಂದಾಗಿ ಖರೀದಿಸಲಾಗಿದ್ದು, ಕೊರತೆ ತಕ್ಕ ಮಟ್ಟಿಗೆ ನೀಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.</p>.<p>‘ಕೊರತೆ ಇದ್ದ 170 ಔಷಧಗಳ ಖರೀದಿಗೆ ಆದೇಶವಾಗಿದೆ. 82 ಔಷಧಗಳ ಪೂರೈಕೆ ಆದೇಶ ಆಗಿದೆ. ಈ ಔಷಧಗಳು ಒಂದೊಂದಾಗಿ ಜಿಲ್ಲಾ ಔಷಧ ಉಗ್ರಾಣಕ್ಕೆ ತಲುಪಲಿವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p>‘ಆದರೆ,ಒಳರೋಗಿಗಳು ಯಾವುದೇ ಔಷಧವನ್ನು ಹೊರಗಿನಿಂದ ಖರೀದಿಸುವ ಪ್ರಮೇಯ ಇಲ್ಲ. ವಿರಳ ಔಷಧಗಳನ್ನು ಮಾತ್ರ ಹೊರಗಿನಿಂದ ತರಿಸಿಕೊಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. </p>.<p>‘ಉಡುಪಿ ಜಿಲ್ಲೆಯಲ್ಲಿ ಯಾವುದೇ ಔಷಧಗಳ ಕೊರತೆ ಇಲ್ಲ. ಜಿಲ್ಲೆಯಲ್ಲಿ ಹೆರಿಗೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಜನರು ಕಡಿಮೆ. ಈ ಕಾರಣಕ್ಕೆ ಹೆಚ್ಚಿನ ಔಷಧಗಳ ಕೊರತೆ ಆಗಿಲ್ಲ’ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>