<p><strong>ಬೆಂಗಳೂರು:</strong> ‘ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲೇ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ನಿಮಗೆ ಹೇಳಿದ್ದು ಯಾರು’ ಎಂದು ಗೃಹಸಚಿವ ಜಿ.ಪರಮೇಶ್ವರ ಅವರು ಪ್ರಶ್ನಿಸಿದರು.</p><p>ಗುರುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ರೀತಿಯ ಮಾಹಿತಿ ನಿಮಗೆ ಯಾರು ಕೊಡುತ್ತಾರೆ? ಇ.ಡಿಯವರು ತನಿಖೆ ನಡೆಸಿ ವರದಿ ನೀಡಲಿ. ಆಮೇಲೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಏಕೆ ಉತ್ತರ ನೀಡಬೇಕು’ ಎಂದರು.</p><p>ರನ್ಯಾ ರಾವ್ ಅವರಿಗೆ ಪರಮೇಶ್ವರ ಅವರು ಮದುವೆ ಉಡುಗೊರೆ ನೀಡಿರಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವ ಬಗ್ಗೆ ಪ್ರಶ್ನಿಸಿದಾಗ, ‘ಆ ಬಗ್ಗೆ ಅವರ ಬಳಿಯೇ ಕೇಳಿ. ನನ್ನನ್ನೇಕೆ ಕೇಳುತ್ತೀರಿ’ ಎಂದರು.</p><p>‘ಈ ಪ್ರಕರಣದಲ್ಲಿ ಇ.ಡಿಯವರ ತನಿಖೆಗೆ ನಾನು ಸಹಕರಿಸುತ್ತೇನೆ. ನಾನು ರಾಜ್ಯದ ಗೃಹ ಸಚಿವ, ಕಾನೂನು ಪಾಲನೆ ಹೊಣೆಗಾರಿಕೆ ನನ್ನ ಮೇಲೆ ಇದೆ. ಹೀಗಿರುವಾಗ ತನಿಖೆಗೆ ಸಹಕಾರ ನೀಡುವುದಿಲ್ಲ ಎನ್ನಲಾಗುತ್ತದೆಯೇ? ಅವರು ತನಿಖೆ ನಡೆಸಲಿ. ಸತ್ಯಾಂಶ ಹೊರಗೆ ಬರಲಿ’ ಎಂದರು.</p><p><strong>ಮದುವೆ ಉಡುಗೊರೆ:</strong> </p><p>ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ಅವರು, ‘ನಾವೆಲ್ಲಾ ಪರಿಚಯಸ್ಥರ ಮದುವೆಯಲ್ಲಿ ಉಡುಗೊರೆ ನೀಡುತ್ತೇವೆ. ₹1 ನೀಡಬಹುದು, ₹100 ನೀಡಬಹುದು, ₹1 ಲಕ್ಷ ಅಥವಾ ₹ 10 ಲಕ್ಷ ನೀಡಬಹುದು. ಪರಮೇಶ್ವರ ಅವರೂ ಹಾಗೇ ಉಡುಗೊರೆ ನೀಡಿರಬಹುದು. ಇದರಲ್ಲಿ ವಿಶೇಷ ಏನೂ ಇಲ್ಲ, ತಪ್ಪೂ ಇಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲೇ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ನಿಮಗೆ ಹೇಳಿದ್ದು ಯಾರು’ ಎಂದು ಗೃಹಸಚಿವ ಜಿ.ಪರಮೇಶ್ವರ ಅವರು ಪ್ರಶ್ನಿಸಿದರು.</p><p>ಗುರುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ರೀತಿಯ ಮಾಹಿತಿ ನಿಮಗೆ ಯಾರು ಕೊಡುತ್ತಾರೆ? ಇ.ಡಿಯವರು ತನಿಖೆ ನಡೆಸಿ ವರದಿ ನೀಡಲಿ. ಆಮೇಲೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಏಕೆ ಉತ್ತರ ನೀಡಬೇಕು’ ಎಂದರು.</p><p>ರನ್ಯಾ ರಾವ್ ಅವರಿಗೆ ಪರಮೇಶ್ವರ ಅವರು ಮದುವೆ ಉಡುಗೊರೆ ನೀಡಿರಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವ ಬಗ್ಗೆ ಪ್ರಶ್ನಿಸಿದಾಗ, ‘ಆ ಬಗ್ಗೆ ಅವರ ಬಳಿಯೇ ಕೇಳಿ. ನನ್ನನ್ನೇಕೆ ಕೇಳುತ್ತೀರಿ’ ಎಂದರು.</p><p>‘ಈ ಪ್ರಕರಣದಲ್ಲಿ ಇ.ಡಿಯವರ ತನಿಖೆಗೆ ನಾನು ಸಹಕರಿಸುತ್ತೇನೆ. ನಾನು ರಾಜ್ಯದ ಗೃಹ ಸಚಿವ, ಕಾನೂನು ಪಾಲನೆ ಹೊಣೆಗಾರಿಕೆ ನನ್ನ ಮೇಲೆ ಇದೆ. ಹೀಗಿರುವಾಗ ತನಿಖೆಗೆ ಸಹಕಾರ ನೀಡುವುದಿಲ್ಲ ಎನ್ನಲಾಗುತ್ತದೆಯೇ? ಅವರು ತನಿಖೆ ನಡೆಸಲಿ. ಸತ್ಯಾಂಶ ಹೊರಗೆ ಬರಲಿ’ ಎಂದರು.</p><p><strong>ಮದುವೆ ಉಡುಗೊರೆ:</strong> </p><p>ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ಅವರು, ‘ನಾವೆಲ್ಲಾ ಪರಿಚಯಸ್ಥರ ಮದುವೆಯಲ್ಲಿ ಉಡುಗೊರೆ ನೀಡುತ್ತೇವೆ. ₹1 ನೀಡಬಹುದು, ₹100 ನೀಡಬಹುದು, ₹1 ಲಕ್ಷ ಅಥವಾ ₹ 10 ಲಕ್ಷ ನೀಡಬಹುದು. ಪರಮೇಶ್ವರ ಅವರೂ ಹಾಗೇ ಉಡುಗೊರೆ ನೀಡಿರಬಹುದು. ಇದರಲ್ಲಿ ವಿಶೇಷ ಏನೂ ಇಲ್ಲ, ತಪ್ಪೂ ಇಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>