ಆಗ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಚಪ್ಪಲಿ ಪುರಾಣ ಬಿಚ್ಚಿಟ್ಟರು. ‘ದೇವಸ್ಥಾನದಲ್ಲಿ ಪಾದರಕ್ಷೆ ಬಿಟ್ಟು ಹೋಗಬೇಕು ಎಂಬ ನಿಯಮ ರೂಪಿಸಲಾಗಿರುತ್ತದೆ, ಅಲ್ಲಿನ ಕಾವಲುಗಾರ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಾನೆ. ಒಮ್ಮೆ ಒಬ್ಬ ಭಕ್ತ ಮನೆಯಿಂದ ಬರಿಗಾಲಲ್ಲೇ ದೇವಸ್ಥಾನಕ್ಕೆ ಬರುತ್ತಾನೆ, ನಿಯಮ ಪಾಲನೆಗೆ ನಿಂತಿದ್ದ ಕಾವಲುಗಾರ, ಚಪ್ಪಲಿ ಇಲ್ಲಿ ಬಿಟ್ಟು ಹೋಗಬೇಕು, ನೀವು ಮನೆಗೆ ಹೋಗಿ ಮತ್ತೆ ಚಪ್ಪಲಿ ಹಾಕಿಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದನಂತೆ...’ ಎಂದು ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು.