ವೀರಾಪುರದ ಚಂದ್ರೇಗೌಡ, ತಮ್ಮಯ್ಯ, ತಿಲಕ್, ನಾಗರಾಜ್ ಹಾಗೂ ಜೆಸಿಬಿ ಯಂತ್ರದ ಮಾಲೀಕ ಪ್ರಸಾದ್ ಎಂಬುವರನ್ನು ದಂತ ಮಾರಾಟ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಇವರು ನೀಡಿದ್ದ ಮಾಹಿತಿ ಆಧರಿಸಿ ವೀರಾಪುರದಲ್ಲಿ ಭಾನುವಾರ ಕಾರ್ಯಾ
ಚರಣೆ ನಡೆಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಹೂತಿದ್ದ ಆನೆಯ ಕಳೇಬರ ಹೊರಗೆ ತೆಗೆದರು. ಕಳೇಬರ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.