ಲಾಕ್ಡೌನ್ ಬಳಿಕ ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದೆ. ಹೀಗಾಗಿ, ಕಾಡಾನೆಗಳು ಭೀತಿಯಿಲ್ಲದೇ ಅರಣ್ಯ ಪ್ರದೇಶದಿಂದ ರಸ್ತೆಗೆ ಬರುತ್ತಿವೆ. ಆನೆ ಸೇರಿದಂತೆ ವನ್ಯಜೀವಿಗಳು ಯಾವುದೇ ಅಳುಕು ಇಲ್ಲದೇ ಸಂಚಾರ ನಡೆಸುತ್ತಿರುವ ದೃಶ್ಯ ಒಂದು ವಾರದಿಂದ ಸಾಮಾನ್ಯವಾಗಿದೆ. ಮಾಲ್ದಾರೆ, ಆನೆಚೌಕೂರು, ಸಿದ್ದಾಪುರ, ಗುಹ್ಯದಲ್ಲಿ ಆನೆಗಳು ರಸ್ತೆಗೆ ಬರುತ್ತಿವೆ.