ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಗಳೂರಿನಲ್ಲಿ ಒಂದೇ ಗಲಭೆ ಆಗಿರಲಿಲ್ಲ. ಇಂದು ಮಂಗಳೂರಿನಲ್ಲಿ ಗಲಭೆಗೆ ಪೊಲೀಸರೇ ಕಾರಣ. ಮಂಗಳೂರಿನ ಕೆಲವು ಬಿಜೆಪಿ ಮುಖಂಡರ ಆದೇಶದ ಮೇಲೆ ಗುಂಡು ಹಾರಿಸಲಾಗಿದೆ. ಶಾಂತಿ ಸಂಧಾನಕ್ಕೆ ಬಂದ ಮಾಜಿ ಮೇಯರ್ ಗೆ ರಬ್ಬರ್ ಗುಂಡು ಹಾರಿಸಲಾಗಿದೆ. ಟೆಂಪೋದಲ್ಲಿ ಮನೆ ಕಟ್ಟಲು ಕಲ್ಲು ತುಂಬಿಕೊಂಡು ಹೋಗುತ್ತಿದ್ದದ್ದೋ ಏನೋ... ಅದನ್ನು ಗಲಭೆಗೆ ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ತಪ್ಪು ಸಂದೇಶ ರವಾನಿಸಬಾರದು ಎಂದು ಮನವಿ ಮಾಡಿದರು.