ಬೆಂಗಳೂರು: ಸಾಹಿತಿ ಬಿ.ಎಲ್. ವೇಣು ಅವರನ್ನು 2022ನೇ ಸಾಲಿನ ಕನ್ನಡ ಹಾಗೂ ಕರ್ನಾಟಕ ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಪತ್ರಕರ್ತ ಗುರುರಾಜ್, ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ, ನಿರ್ದೇಶಕ ಎಸ್.ಮಹೇಂದರ್, ನಟಿ ವೀಣಾ ಸುಂದರ್, ನಟ ಕರಿಸುಬ್ಬು (ಸದಸ್ಯರು) ಹಾಗೂ ವಾರ್ತಾ ಇಲಾಖೆ ಆಯುಕ್ತರನ್ನು (ಸದಸ್ಯ ಕಾರ್ಯದರ್ಶಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಮಿತಿಗೆ ನೇಮಿಸಿದೆ.