<p><strong>ಬಳ್ಳಾರಿ</strong>/<strong>ಹೊಸಪೇಟೆ</strong>:ನಿರಂತರ ಪ್ರತಿಭಟನೆ, ಆಕ್ಷೇಪಣೆ ಹಾಗೂ ಹೊಸ ಜಿಲ್ಲೆಯ ಪ್ರತಿಪಾದನೆಗಳ ನಡುವೆಯೇ ರಾಜ್ಯದಲ್ಲಿ 31ನೇ ಜಿಲ್ಲೆಯಾಗಿ ‘ವಿಜಯನಗರ’ ಉದಯವಾಗಿದೆ. ಹೊಸ ಜಿಲ್ಲೆಯ ರಚನೆಯ ಪ್ರಮುಖ ಪ್ರೇರಕ ಶಕ್ತಿಯಾಗಿದ್ದ ಸಚಿವ ಆನಂದ್ಸಿಂಗ್ ಅವರ ಪ್ರಯತ್ನವೂ ಕೈಗೂಡಿದೆ.</p>.<p>ಸೋಮವಾರ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿದ್ದು, ವಿಜಯನಗರ ಜಿಲ್ಲೆಗೆ6 ತಾಲ್ಲೂಕು, ಬಳ್ಳಾರಿಗೆ 5 ತಾಲ್ಲೂಕನ್ನು ಸೇರಿಸಲಾಗಿದೆ. ಆ ಮೂಲಕ ಬಳ್ಳಾರಿಯು ಐತಿಹಾಸಿಕ ‘ಹಂಪಿ’ ಹಾಗೂ ‘ತುಂಗಭದ್ರಾ ಜಲಾಶಯ’ದೊಂದಿಗೆ ಭಾವನಾತ್ಮಕ ನಂಟನ್ನು ಕಳೆದುಕೊಂಡಂತಾಗಿದೆ. ಹೊಸ ಜಿಲ್ಲೆಯ ತಾಲ್ಲೂಕುಗಳಲ್ಲಿ ಅಭಿವೃದ್ಧಿಯ ಕನಸು ಚಿಗುರಿದೆ.</p>.<p>ಅಖಂಡ ಜಿಲ್ಲೆಯ ಪ್ರತಿಪಾದಕರು ಕಾನೂನು ಹೋರಾಟಕ್ಕೆ ಸಜ್ಜಾಗಿದ್ದರೆ, ವಿಜಯನಗರ ಜಿಲ್ಲೆಯ ತಾಲ್ಲೂಕುಗಳಲ್ಲಿ ವಿಜಯೋತ್ಸವ ನಡೆದಿದೆ. ಪಶ್ಚಿಮ ತಾಲ್ಲೂಕುಗಳ ಅಭಿವೃದ್ಧಿಗಾಗಿ ವಿಶಾಲ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಯನ್ನು ಘೋಷಿಸಬೇಕೆಂದು ಜನರ ಹೋರಾಟಕ್ಕೆ ಒಂದೂವರೆ ದಶಕದ ಇತಿಹಾಸವೂ ಇದೆ. ಈ ಭಾಗದ ಜನರಲ್ಲಿ ಈಗ ‘ಆನಂದ’ ಮೂಡಿದೆ.</p>.<p>ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ ಹನ್ನೊಂದು ತಾಲ್ಲೂಕುಗಳಿದ್ದು, ಜಿಲ್ಲಾ ಕೇಂದ್ರದಿಂದ ಹೂವಿನಹಡಗಲಿ, ಹರಪನಹಳ್ಳಿ ತಾಲ್ಲೂಕಿನ ಅಂಚಿನ ಗ್ರಾಮಗಳು ಸುಮಾರು ಇನ್ನೂರು ಕಿ.ಮೀಗೂ ಹೆಚ್ಚು ದೂರದಲ್ಲಿವೆ. ಈ ದೂರದ ಕಾರಣಕ್ಕೆ ಜನ ಸಮಸ್ಯೆಗಳನ್ನೆದುರಿಸುತ್ತಿದ್ದುದರಿಂದ ವಿಭಜನೆ ಅನುಕೂಲಕರವಾಗಿದೆ ಎಂಬುದು ಪಶ್ಚಿಮ ತಾಲ್ಲೂಕುಗಳ ಜನರ ಪ್ರತಿಪಾದನೆ.</p>.<p>ಆದರೆ ಅಖಂಡ ಜಿಲ್ಲೆಯ ಪ್ರತಿಪಾದಕರು, ಸರ್ಕಾರದ ‘ಆಡಳಿತಾತ್ಮಕ ಅನುಕೂಲಕ್ಕಾಗಿ ಜಿಲ್ಲೆ ವಿಭಜನೆ’ ಎಂಬುದನ್ನೂ ವಿರೋಧಿಸಿದ್ದಾರೆ. ಹೊಸಪೇಟೆ ಜಿಲ್ಲಾ ಕೇಂದ್ರವಾಗುವುದರಿಂದ ಹಡಗಲಿ, ಹರಪನಹಳ್ಳಿಯ ಗಡಿಭಾಗದ ಜನರಿಗೆ ಯಾವ ಅನುಕೂಲವೂ ಆಗುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.</p>.<p>‘ವಿಜಯನಗರ ಸಾಮ್ರಾಜ್ಯ’ದ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕಾದರೆ ಅದೇ ಹೆಸರಿನಲ್ಲಿ ಜಿಲ್ಲೆ ರಚನೆಯಾಗಬೇಕು. ಅದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ’ಎಂದಿದ್ದರು ಆನಂದ್ಸಿಂಗ್. ಅದಕ್ಕಾಗಿಯೇ, ಎರಡು ಬಾರಿ ಖಾತೆ ಬದಲಾದರೂ, ವೈಯಕ್ತಿಕ ಟೀಕೆಗಳೆದ್ದರೂ ದನಿ ಎತ್ತಿರಲಿಲ್ಲ.</p>.<p><strong>ಹೋರಾಟದ ಹಿನ್ನೆಲೆ:</strong> ಜಿಲ್ಲೆಯ ವಿಭಜನೆಗಾಗಿ 13 ವರ್ಷದ ಹಿಂದೆ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯು ಸತತ ಮೂರು ತಿಂಗಳು ಹೋರಾಟ ನಡೆಸಿತ್ತು. 2019ರಲ್ಲಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.</p>.<p class="Briefhead"><strong>‘ವಿಜಯನಗರ ವಿಜಯೋತ್ಸವ’ಕ್ಕೆ ಸಿದ್ಧತೆ</strong></p>.<p>ವಿಜಯನಗರ ಜಿಲ್ಲೆ ರಚನೆಯಾಗಿರುವುದರಿಂದ ವಿಜಯೋತ್ಸವವನ್ನು ಏರ್ಪಡಿಸಲಿದ್ದು, ಕಾರ್ಯಕ್ರಮದ ವೇದಿಕೆ ನಿರ್ಮಿಸಲು ಎರಡರಿಂದ ಮೂರು ತಿಂಗಳು ಅವಧಿ ಹಿಡಿಯಲಿದೆ. ಇಡೀ ದೇಶ ವಿಜಯನಗರದ ವೈಭವ ನೋಡುವ ರೀತಿಯಲ್ಲಿ ಆ ಕಾರ್ಯಕ್ರಮ ಸಂಘಟಿಸಲಾಗುವುದು’ ಎಂದು ಸಚಿವ ಆನಂದ್ಸಿಂಗ್ ತಿಳಿಸಿದ್ದಾರೆ.</p>.<p class="Briefhead"><strong>‘ಜನರಿಗೆ ತಪ್ಪು ಮಾಹಿತಿ ನೀಡಿದ ಸರ್ಕಾರ’</strong></p>.<p>’ವಿಭಜನೆ ವಿರುದ್ಧ ಸಲ್ಲಿಸಿದ ಆಕ್ಷೇಪಣೆಗಳ ಕುರಿತು ಚರ್ಚೆಯನ್ನೇ ನಡೆಸದೆ ಸರ್ಕಾರ ತಪ್ಪು ಮಾಹಿತಿ ನೀಡಿದೆ’ ಎಂದು ಅಖಂಡ ಬಳ್ಳಾರಿ ಜಿಲ್ಲೆ ಪ್ರತಿಪಾದಕರಾದ ಎಸ್.ಪನ್ನರಾಜ್, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಆರೋಪಿಸಿದ್ದಾರೆ.</p>.<p>‘ತನ್ನ ನಿರ್ಧಾರದ ಕುರಿತು ಜನರ ಧ್ವನಿಯನ್ನು ಆಲಿಸುವ, ಪ್ರಯತ್ನವನ್ನೇ ಸರ್ಕಾರ ಮಾಡದಿರುವುದು ಕಾನೂನಿನ ಆಶಯವನ್ನು ಮೂಲೆಗುಂಪು ಮಾಡಿದಂತಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<p class="Briefhead"><strong>ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಸೇರಿದ ತಾಲ್ಲೂಕುಗಳು</strong></p>.<p>* ಹೊಸಪೇಟೆ (ಕೇಂದ್ರ ಸ್ಥಾನ)<br />* ಕೂಡ್ಲಿಗಿ<br />* ಕೊಟ್ಟೂರು<br />* ಹಗರಿಬೊಮ್ಮನಹಳ್ಳಿ<br />* ಹೂವಿನಹಡಗಲಿ<br />* ಹರಪನಹಳ್ಳಿ</p>.<p class="Briefhead"><strong>ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಸೇರಿದ ತಾಲ್ಲೂಕುಗಳು</strong></p>.<p>* ಬಳ್ಳಾರಿ (ಕೇಂದ್ರ ಸ್ಥಾನ)<br />* ಸಂಡೂರು<br />* ಸಿರುಗುಪ್ಪ<br />* ಕಂಪ್ಲಿ<br />* ಕುರುಗೋಡು</p>.<p>***</p>.<p>ಸರ್ವಾಧಿಕಾರಿ ಧೋರಣೆಯಿಂದ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ</p>.<p>–<strong><em>ಎಸ್</em></strong>.<strong><em>ಪನ್ನರಾಜ್</em></strong>, <em><strong>ಅಖಂಡ</strong></em> <em><strong>ಬಳ್ಳಾರಿ</strong></em> <em><strong>ಹೋರಾಟ</strong></em> <em><strong>ಸಮಿತಿ</strong></em> <strong><em>ಮುಖಂಡರು</em></strong></p>.<p>***</p>.<p>ಪಶ್ಚಿಮ ತಾಲ್ಲೂಕುಗಳ ಜನರ ಎರಡು ದಶಕಗಳ ಕನಸು ಸಾಕಾರಗೊಂಡಿದೆ. ಅಭಿವೃದ್ಧಿಯ ಹೊಸ ಶಕೆ ಆರಂಭವಾಗುತ್ತದೆ. ಪಕ್ಷಾತೀತ ಹೋರಾಟಕ್ಕೆ ಸಂದ ಜಯ.</p>.<p>–<em><strong>ವೈ. ಯಮುನೇಶ , ಸಂಚಾಲಕ ವಿಜಯನಗರ ಜಿಲ್ಲಾ ಹೋರಾಟ ಸಮಿತಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>/<strong>ಹೊಸಪೇಟೆ</strong>:ನಿರಂತರ ಪ್ರತಿಭಟನೆ, ಆಕ್ಷೇಪಣೆ ಹಾಗೂ ಹೊಸ ಜಿಲ್ಲೆಯ ಪ್ರತಿಪಾದನೆಗಳ ನಡುವೆಯೇ ರಾಜ್ಯದಲ್ಲಿ 31ನೇ ಜಿಲ್ಲೆಯಾಗಿ ‘ವಿಜಯನಗರ’ ಉದಯವಾಗಿದೆ. ಹೊಸ ಜಿಲ್ಲೆಯ ರಚನೆಯ ಪ್ರಮುಖ ಪ್ರೇರಕ ಶಕ್ತಿಯಾಗಿದ್ದ ಸಚಿವ ಆನಂದ್ಸಿಂಗ್ ಅವರ ಪ್ರಯತ್ನವೂ ಕೈಗೂಡಿದೆ.</p>.<p>ಸೋಮವಾರ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿದ್ದು, ವಿಜಯನಗರ ಜಿಲ್ಲೆಗೆ6 ತಾಲ್ಲೂಕು, ಬಳ್ಳಾರಿಗೆ 5 ತಾಲ್ಲೂಕನ್ನು ಸೇರಿಸಲಾಗಿದೆ. ಆ ಮೂಲಕ ಬಳ್ಳಾರಿಯು ಐತಿಹಾಸಿಕ ‘ಹಂಪಿ’ ಹಾಗೂ ‘ತುಂಗಭದ್ರಾ ಜಲಾಶಯ’ದೊಂದಿಗೆ ಭಾವನಾತ್ಮಕ ನಂಟನ್ನು ಕಳೆದುಕೊಂಡಂತಾಗಿದೆ. ಹೊಸ ಜಿಲ್ಲೆಯ ತಾಲ್ಲೂಕುಗಳಲ್ಲಿ ಅಭಿವೃದ್ಧಿಯ ಕನಸು ಚಿಗುರಿದೆ.</p>.<p>ಅಖಂಡ ಜಿಲ್ಲೆಯ ಪ್ರತಿಪಾದಕರು ಕಾನೂನು ಹೋರಾಟಕ್ಕೆ ಸಜ್ಜಾಗಿದ್ದರೆ, ವಿಜಯನಗರ ಜಿಲ್ಲೆಯ ತಾಲ್ಲೂಕುಗಳಲ್ಲಿ ವಿಜಯೋತ್ಸವ ನಡೆದಿದೆ. ಪಶ್ಚಿಮ ತಾಲ್ಲೂಕುಗಳ ಅಭಿವೃದ್ಧಿಗಾಗಿ ವಿಶಾಲ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಯನ್ನು ಘೋಷಿಸಬೇಕೆಂದು ಜನರ ಹೋರಾಟಕ್ಕೆ ಒಂದೂವರೆ ದಶಕದ ಇತಿಹಾಸವೂ ಇದೆ. ಈ ಭಾಗದ ಜನರಲ್ಲಿ ಈಗ ‘ಆನಂದ’ ಮೂಡಿದೆ.</p>.<p>ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ ಹನ್ನೊಂದು ತಾಲ್ಲೂಕುಗಳಿದ್ದು, ಜಿಲ್ಲಾ ಕೇಂದ್ರದಿಂದ ಹೂವಿನಹಡಗಲಿ, ಹರಪನಹಳ್ಳಿ ತಾಲ್ಲೂಕಿನ ಅಂಚಿನ ಗ್ರಾಮಗಳು ಸುಮಾರು ಇನ್ನೂರು ಕಿ.ಮೀಗೂ ಹೆಚ್ಚು ದೂರದಲ್ಲಿವೆ. ಈ ದೂರದ ಕಾರಣಕ್ಕೆ ಜನ ಸಮಸ್ಯೆಗಳನ್ನೆದುರಿಸುತ್ತಿದ್ದುದರಿಂದ ವಿಭಜನೆ ಅನುಕೂಲಕರವಾಗಿದೆ ಎಂಬುದು ಪಶ್ಚಿಮ ತಾಲ್ಲೂಕುಗಳ ಜನರ ಪ್ರತಿಪಾದನೆ.</p>.<p>ಆದರೆ ಅಖಂಡ ಜಿಲ್ಲೆಯ ಪ್ರತಿಪಾದಕರು, ಸರ್ಕಾರದ ‘ಆಡಳಿತಾತ್ಮಕ ಅನುಕೂಲಕ್ಕಾಗಿ ಜಿಲ್ಲೆ ವಿಭಜನೆ’ ಎಂಬುದನ್ನೂ ವಿರೋಧಿಸಿದ್ದಾರೆ. ಹೊಸಪೇಟೆ ಜಿಲ್ಲಾ ಕೇಂದ್ರವಾಗುವುದರಿಂದ ಹಡಗಲಿ, ಹರಪನಹಳ್ಳಿಯ ಗಡಿಭಾಗದ ಜನರಿಗೆ ಯಾವ ಅನುಕೂಲವೂ ಆಗುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.</p>.<p>‘ವಿಜಯನಗರ ಸಾಮ್ರಾಜ್ಯ’ದ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕಾದರೆ ಅದೇ ಹೆಸರಿನಲ್ಲಿ ಜಿಲ್ಲೆ ರಚನೆಯಾಗಬೇಕು. ಅದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ’ಎಂದಿದ್ದರು ಆನಂದ್ಸಿಂಗ್. ಅದಕ್ಕಾಗಿಯೇ, ಎರಡು ಬಾರಿ ಖಾತೆ ಬದಲಾದರೂ, ವೈಯಕ್ತಿಕ ಟೀಕೆಗಳೆದ್ದರೂ ದನಿ ಎತ್ತಿರಲಿಲ್ಲ.</p>.<p><strong>ಹೋರಾಟದ ಹಿನ್ನೆಲೆ:</strong> ಜಿಲ್ಲೆಯ ವಿಭಜನೆಗಾಗಿ 13 ವರ್ಷದ ಹಿಂದೆ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯು ಸತತ ಮೂರು ತಿಂಗಳು ಹೋರಾಟ ನಡೆಸಿತ್ತು. 2019ರಲ್ಲಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.</p>.<p class="Briefhead"><strong>‘ವಿಜಯನಗರ ವಿಜಯೋತ್ಸವ’ಕ್ಕೆ ಸಿದ್ಧತೆ</strong></p>.<p>ವಿಜಯನಗರ ಜಿಲ್ಲೆ ರಚನೆಯಾಗಿರುವುದರಿಂದ ವಿಜಯೋತ್ಸವವನ್ನು ಏರ್ಪಡಿಸಲಿದ್ದು, ಕಾರ್ಯಕ್ರಮದ ವೇದಿಕೆ ನಿರ್ಮಿಸಲು ಎರಡರಿಂದ ಮೂರು ತಿಂಗಳು ಅವಧಿ ಹಿಡಿಯಲಿದೆ. ಇಡೀ ದೇಶ ವಿಜಯನಗರದ ವೈಭವ ನೋಡುವ ರೀತಿಯಲ್ಲಿ ಆ ಕಾರ್ಯಕ್ರಮ ಸಂಘಟಿಸಲಾಗುವುದು’ ಎಂದು ಸಚಿವ ಆನಂದ್ಸಿಂಗ್ ತಿಳಿಸಿದ್ದಾರೆ.</p>.<p class="Briefhead"><strong>‘ಜನರಿಗೆ ತಪ್ಪು ಮಾಹಿತಿ ನೀಡಿದ ಸರ್ಕಾರ’</strong></p>.<p>’ವಿಭಜನೆ ವಿರುದ್ಧ ಸಲ್ಲಿಸಿದ ಆಕ್ಷೇಪಣೆಗಳ ಕುರಿತು ಚರ್ಚೆಯನ್ನೇ ನಡೆಸದೆ ಸರ್ಕಾರ ತಪ್ಪು ಮಾಹಿತಿ ನೀಡಿದೆ’ ಎಂದು ಅಖಂಡ ಬಳ್ಳಾರಿ ಜಿಲ್ಲೆ ಪ್ರತಿಪಾದಕರಾದ ಎಸ್.ಪನ್ನರಾಜ್, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಆರೋಪಿಸಿದ್ದಾರೆ.</p>.<p>‘ತನ್ನ ನಿರ್ಧಾರದ ಕುರಿತು ಜನರ ಧ್ವನಿಯನ್ನು ಆಲಿಸುವ, ಪ್ರಯತ್ನವನ್ನೇ ಸರ್ಕಾರ ಮಾಡದಿರುವುದು ಕಾನೂನಿನ ಆಶಯವನ್ನು ಮೂಲೆಗುಂಪು ಮಾಡಿದಂತಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<p class="Briefhead"><strong>ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಸೇರಿದ ತಾಲ್ಲೂಕುಗಳು</strong></p>.<p>* ಹೊಸಪೇಟೆ (ಕೇಂದ್ರ ಸ್ಥಾನ)<br />* ಕೂಡ್ಲಿಗಿ<br />* ಕೊಟ್ಟೂರು<br />* ಹಗರಿಬೊಮ್ಮನಹಳ್ಳಿ<br />* ಹೂವಿನಹಡಗಲಿ<br />* ಹರಪನಹಳ್ಳಿ</p>.<p class="Briefhead"><strong>ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಸೇರಿದ ತಾಲ್ಲೂಕುಗಳು</strong></p>.<p>* ಬಳ್ಳಾರಿ (ಕೇಂದ್ರ ಸ್ಥಾನ)<br />* ಸಂಡೂರು<br />* ಸಿರುಗುಪ್ಪ<br />* ಕಂಪ್ಲಿ<br />* ಕುರುಗೋಡು</p>.<p>***</p>.<p>ಸರ್ವಾಧಿಕಾರಿ ಧೋರಣೆಯಿಂದ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ</p>.<p>–<strong><em>ಎಸ್</em></strong>.<strong><em>ಪನ್ನರಾಜ್</em></strong>, <em><strong>ಅಖಂಡ</strong></em> <em><strong>ಬಳ್ಳಾರಿ</strong></em> <em><strong>ಹೋರಾಟ</strong></em> <em><strong>ಸಮಿತಿ</strong></em> <strong><em>ಮುಖಂಡರು</em></strong></p>.<p>***</p>.<p>ಪಶ್ಚಿಮ ತಾಲ್ಲೂಕುಗಳ ಜನರ ಎರಡು ದಶಕಗಳ ಕನಸು ಸಾಕಾರಗೊಂಡಿದೆ. ಅಭಿವೃದ್ಧಿಯ ಹೊಸ ಶಕೆ ಆರಂಭವಾಗುತ್ತದೆ. ಪಕ್ಷಾತೀತ ಹೋರಾಟಕ್ಕೆ ಸಂದ ಜಯ.</p>.<p>–<em><strong>ವೈ. ಯಮುನೇಶ , ಸಂಚಾಲಕ ವಿಜಯನಗರ ಜಿಲ್ಲಾ ಹೋರಾಟ ಸಮಿತಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>