<p><strong>ಉಡುಪಿ: </strong>ಕುಂದಾಪುರ ಸಮೀಪದ ಕೋಡಿ ಹಳೆ ಅಳವೆ ಕಡಲತೀರದಲ್ಲಿ ಈಚೆಗೆ ಕೈರಂಪಣಿ ಬಲೆಗೆ ರಾಶಿರಾಶಿ ಭೂತಾಯಿ (ಬೈಗೆ) ಮೀನು ಸಿಕ್ಕಿಬಿದ್ದಿದೆ. ಬಲೆಗೆ ಸಿಕ್ಕಿಬಿದ್ದ ಭಾರಿ ಪ್ರಮಾಣದ ಮೀನನ್ನು ದಡಕ್ಕೆ ಎಳೆದು ತರಲು ಮೀನುಗಾರರು ಹರಸಾಹಸ ಪಡಬೇಕಾಯಿತು.</p>.<p>ಬಲೆಯನ್ನು ದಡಕ್ಕೆ ಎಳೆದು ತರುತ್ತಿದ್ದಂತೆ ಮೀನುಗಳು ವಿಲವಿಲನೆ ಒದ್ದಾಡಿದವು. ಸ್ಥಳೀಯರು ಕೈಗೆ ಸಿಕ್ಕಷ್ಟು ಬಾಚಿಕೊಂಡು ಹೋದರು. ತೀರದಲ್ಲಿ ವಾಸಮಾಡುತ್ತಿದ್ದ ಮೀನುಗಾರರು, ವ್ಯಾಪಾರಿಗಳೆಲ್ಲ ಸೇರಿ ಮೀನಿನ ರಾಶಿಯನ್ನು ದಡಕ್ಕೆ ಎಳೆದುತಂದರು.</p>.<p>ಕರಾವಳಿಯಲ್ಲಿ ಭೂತಾಯಿ ಮೀನಿಗೆ ಬೇಡಿಕೆ ಹೆಚ್ಚು. ಸ್ಥಳೀಯವಾಗಿ ಇದನ್ನು ಬೈಗೆ ಎಂತಲೂ ಕರೆಯಲಾಗುತ್ತದೆ. ಇತರ ಮೀನುಗಳಿಗಿಂತ ಭೂತಾಯಿ ಮೀನಿನ ರುಚಿ ಭಿನ್ನ. ಹೊರ ರಾಜ್ಯಗಳಲ್ಲೂ ಈ ಮೀನಿಗೆ ಬೇಡಿಕೆ ಹೆಚ್ಚು ಎನ್ನುತ್ತಾರೆ ಸ್ಥಳೀಯ ಮೀನುಗಾರರು.</p>.<p>ಅಪರೂಪಕ್ಕೊಮ್ಮೆ ಈ ರೀತಿ ರಾಶಿ ಮೀನುಗಳು ಸಾಂಪ್ರದಾಯಿಕ ಮೀನುಗಾರರ ಬಲೆಗೆ ಬೀಳುತ್ತವೆ. ಹೆಚ್ಚಾಗಿ ಬಂಗುಡೆ, ಭೂತಾಯಿ ಹಾಗೂ ನಂಗ್ ಜಾತಿಯ ಮೀನುಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಬಂಪರ್ ಲಾಟರಿ ಹೊಡೆದಂತೆ ಎನ್ನುತ್ತಾರೆ ಮೀನುಗಾರರು.</p>.<p><strong>ರಾಶಿ ಮೀನುಗಳು ಬಲೆಗೆ ಬೀಳುವುದು ಏಕೆ?</strong></p>.<p>ಆಳ ಸಮುದ್ರದಲ್ಲಿ ಬುಲ್ಟ್ರಾಲ್ ಮೀನುಗಾರಿಕೆ ಸಂಪೂರ್ಣವಾಗಿ ನಿಷೇಧವಾಗಿರುವುದರಿಂದ ಬಂಗುಡೆ, ಭೂತಾಯಿ ಸೇರಿದಂತೆ ಸಣ್ಣಗಾತ್ರದ ಮೀನುಗಳ ಪ್ರಮಾಣ ಹೆಚ್ಚಾಗಿದೆ. ಈ ಜಾತಿಯ ಮೀನುಗಳು ಏಕಾಂಗಿಯಾಗಿ ಸಂಚರಿಸುವುದಿಲ್ಲ. ಗುಂಪಾಗಿಯೇ ಸಾಗುತ್ತವೆ. ಸಮುದ್ರದಲ್ಲಿ ಬೋಟ್ಗಳ ಸದ್ದಿಗೆ ಹೆದರಿ ಕೆಲವೊಮ್ಮೆ ದಡದತ್ತ ಬರುತ್ತವೆ. ಹೀಗೆ, ಬರುವಾಗ ಕೈರಂಪಣಿ ಬಲೆಗೆ ಬೀಳುತ್ತವೆ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಾರ್ಶ್ವನಾಥ್ ಮಾಹಿತಿ ನೀಡಿದರು.</p>.<p>ಈಚೆಗೆ ಹೆಜಮಾಡಿ, ಪಡುಬಿದ್ರೆ ಬೀಚ್ಗಳಲ್ಲೂ ಬಲೆಗೆ ಭಾರಿ ಪ್ರಮಾಣದ ಮೀನುಗಳು ಬಿದ್ದಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಕುಂದಾಪುರ ಸಮೀಪದ ಕೋಡಿ ಹಳೆ ಅಳವೆ ಕಡಲತೀರದಲ್ಲಿ ಈಚೆಗೆ ಕೈರಂಪಣಿ ಬಲೆಗೆ ರಾಶಿರಾಶಿ ಭೂತಾಯಿ (ಬೈಗೆ) ಮೀನು ಸಿಕ್ಕಿಬಿದ್ದಿದೆ. ಬಲೆಗೆ ಸಿಕ್ಕಿಬಿದ್ದ ಭಾರಿ ಪ್ರಮಾಣದ ಮೀನನ್ನು ದಡಕ್ಕೆ ಎಳೆದು ತರಲು ಮೀನುಗಾರರು ಹರಸಾಹಸ ಪಡಬೇಕಾಯಿತು.</p>.<p>ಬಲೆಯನ್ನು ದಡಕ್ಕೆ ಎಳೆದು ತರುತ್ತಿದ್ದಂತೆ ಮೀನುಗಳು ವಿಲವಿಲನೆ ಒದ್ದಾಡಿದವು. ಸ್ಥಳೀಯರು ಕೈಗೆ ಸಿಕ್ಕಷ್ಟು ಬಾಚಿಕೊಂಡು ಹೋದರು. ತೀರದಲ್ಲಿ ವಾಸಮಾಡುತ್ತಿದ್ದ ಮೀನುಗಾರರು, ವ್ಯಾಪಾರಿಗಳೆಲ್ಲ ಸೇರಿ ಮೀನಿನ ರಾಶಿಯನ್ನು ದಡಕ್ಕೆ ಎಳೆದುತಂದರು.</p>.<p>ಕರಾವಳಿಯಲ್ಲಿ ಭೂತಾಯಿ ಮೀನಿಗೆ ಬೇಡಿಕೆ ಹೆಚ್ಚು. ಸ್ಥಳೀಯವಾಗಿ ಇದನ್ನು ಬೈಗೆ ಎಂತಲೂ ಕರೆಯಲಾಗುತ್ತದೆ. ಇತರ ಮೀನುಗಳಿಗಿಂತ ಭೂತಾಯಿ ಮೀನಿನ ರುಚಿ ಭಿನ್ನ. ಹೊರ ರಾಜ್ಯಗಳಲ್ಲೂ ಈ ಮೀನಿಗೆ ಬೇಡಿಕೆ ಹೆಚ್ಚು ಎನ್ನುತ್ತಾರೆ ಸ್ಥಳೀಯ ಮೀನುಗಾರರು.</p>.<p>ಅಪರೂಪಕ್ಕೊಮ್ಮೆ ಈ ರೀತಿ ರಾಶಿ ಮೀನುಗಳು ಸಾಂಪ್ರದಾಯಿಕ ಮೀನುಗಾರರ ಬಲೆಗೆ ಬೀಳುತ್ತವೆ. ಹೆಚ್ಚಾಗಿ ಬಂಗುಡೆ, ಭೂತಾಯಿ ಹಾಗೂ ನಂಗ್ ಜಾತಿಯ ಮೀನುಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಬಂಪರ್ ಲಾಟರಿ ಹೊಡೆದಂತೆ ಎನ್ನುತ್ತಾರೆ ಮೀನುಗಾರರು.</p>.<p><strong>ರಾಶಿ ಮೀನುಗಳು ಬಲೆಗೆ ಬೀಳುವುದು ಏಕೆ?</strong></p>.<p>ಆಳ ಸಮುದ್ರದಲ್ಲಿ ಬುಲ್ಟ್ರಾಲ್ ಮೀನುಗಾರಿಕೆ ಸಂಪೂರ್ಣವಾಗಿ ನಿಷೇಧವಾಗಿರುವುದರಿಂದ ಬಂಗುಡೆ, ಭೂತಾಯಿ ಸೇರಿದಂತೆ ಸಣ್ಣಗಾತ್ರದ ಮೀನುಗಳ ಪ್ರಮಾಣ ಹೆಚ್ಚಾಗಿದೆ. ಈ ಜಾತಿಯ ಮೀನುಗಳು ಏಕಾಂಗಿಯಾಗಿ ಸಂಚರಿಸುವುದಿಲ್ಲ. ಗುಂಪಾಗಿಯೇ ಸಾಗುತ್ತವೆ. ಸಮುದ್ರದಲ್ಲಿ ಬೋಟ್ಗಳ ಸದ್ದಿಗೆ ಹೆದರಿ ಕೆಲವೊಮ್ಮೆ ದಡದತ್ತ ಬರುತ್ತವೆ. ಹೀಗೆ, ಬರುವಾಗ ಕೈರಂಪಣಿ ಬಲೆಗೆ ಬೀಳುತ್ತವೆ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಾರ್ಶ್ವನಾಥ್ ಮಾಹಿತಿ ನೀಡಿದರು.</p>.<p>ಈಚೆಗೆ ಹೆಜಮಾಡಿ, ಪಡುಬಿದ್ರೆ ಬೀಚ್ಗಳಲ್ಲೂ ಬಲೆಗೆ ಭಾರಿ ಪ್ರಮಾಣದ ಮೀನುಗಳು ಬಿದ್ದಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>