ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಕೆ. ಸುಬ್ಬರಾವ್ ಮಾತನಾಡಿ, ‘ದೇಶ ಇಂದು ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಂಘರ್ಷ ವನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಸಮಾಜ ದಲ್ಲಿ ಅಸಮಾನತೆ ಉಂಟು ಮಾಡುತ್ತಿವೆ. ಮೂಲಭೂತವಾದಿಗಳು ದುಡಿಯುವ ವರ್ಗವನ್ನು ವಿಭಜಿಸುತ್ತಿವೆ’ ಎಂದು ಹೇಳಿದರು.