ಸೂಕ್ತ ಪರಿಹಾರಕ್ಕೆ ಒತ್ತಾಯಿಸುವ ಗಂಡಸ್ತನ ಇರುವ ಸಂಸದರು ಬಿಜೆಪಿಯಲ್ಲಿ ಇಲ್ಲವೆಂದು ಜೆ.ಡಿ.ಎಸ್.ನ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರಲ್ಲ. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಎಂದಾಗ, ಗಂಡಸ್ತನ ಇದೇ ಎಂಬ ಕಾರಣಕ್ಕಾಗಿಯೇ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಹಗಲು ಹೇಳಿದನ್ನು ರಾತ್ರಿ ಮರೆಯುವ, ಮಾನ ಮರ್ಯಾದೆ ಇಲ್ಲದವರು ನೀಡುವ ಕ್ಷುಲ್ಲಕ ಹೇಳಿಕೆಗಳಿಗೆ ನಾನು ಹೆಚ್ಚೇನೂ ಹೇಳಲಾರೆ ಎಂದು ಉತ್ತರ ಮುಗಿಸಿದರು.