ಇಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರಿಗಿಂತಲೂ ಮೋದಿ ಸಾಧನೆ ಮಾಡಿದ್ದಾರಾ?’ ಎಂದು ಕೇಳಿದರು.
‘ನೆಹರೂ, ಇಂದಿರಾ ಗಾಂಧಿ ಬಡತನ ನಿರ್ಮೂಲನೆ ಮಾಡಿ ದೇಶವನ್ನು ಅಭಿವೃದ್ಧಿ ಪಥದತ್ತ ತಂದಿದ್ದರು. ಆದರೆ, ದೇವೇಗೌಡರು ಮೋದಿಯನ್ನು ಕೊಂಡಾಡುತ್ತಿರುವುದು ವಿಪರ್ಯಾಸ. ಅವರಂತಹ ಹಿರಿಯ ನಾಯಕರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಜಾತ್ಯತೀತ ಪದಕ್ಕೂ ಅವರು ತಿಲಾಂಜಲಿ ಇಟ್ಟಿದ್ದಾರೆ. ಮೋದಿಯಂತಹ ನಾಯಕನನ್ನು ಕಂಡಿರಲಿಲ್ಲ ಎಂದು ಹೇಳಿರುವುದು ಚಮಚಾಗಿರಿಯಲ್ಲದೇ ಬೇರೇನೂ ಅಲ್ಲ’ ಎಂದು ಹರಿಹಾಯ್ದರು.